ಬೆಂಗಳೂರು: ಹೆಣ್ಣೂರು ಗ್ರಾಮದ ಅರ್ಕಾವತಿ ಬಡಾವಣೆಯ 21ನೇ ಬ್ಲಾಕ್ನಲ್ಲಿ ನಿರ್ಮಿಸಲಾಗಿದ್ದ ಅನಧಿಕೃತ ಶೆಡ್ಗಳನ್ನು ಗುರುವಾರ ತೆರವುಗೊಳಿಸಿದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ), ₹ 115 ಕೋಟಿ ಮೌಲ್ಯದ ಆಸ್ತಿ ವಶಪಡಿಸಿಕೊಂಡಿತು.
ಹೆಣ್ಣೂರು ಗ್ರಾಮದ ಸರ್ವೆ ಸಂಖ್ಯೆ 80/1, 81/4, 81/5, 83/1, 83/4, 84/4ರಲ್ಲಿ ನಿರ್ಮಿಸಲಾಗಿದ್ದ 15 ಶೆಡ್ಗಳು ಮತ್ತು 5 ತಡೆಗೋಡೆಗಳನ್ನು ತೆರವುಗೊಳಿಸಲಾಯಿತು.
ಬಿಡಿಎ ಉತ್ತರ ವಿಭಾಗ ಕಾರ್ಯಪಾಲಕ ಎಂಜಿನಿಯರ್ ಮತ್ತು ಬಿಡಿಎ ಕಾರ್ಯಪಡೆ ಎಸ್ಪಿ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು.
‘ಅನಧಿಕೃತ ಶೆಡ್ಗಳನ್ನು ತೆರವುಗೊಳಿಸಿ ಬಿಡಿಎಗೆ ಸೇರಿದ್ದ 7 ಎಕರೆ ಆಸ್ತಿ ವಶಪಡಿಸಿಕೊಂಡು, ಸುತ್ತ ತಂತಿ ಬೇಲಿ ಅಳವಡಿಸಲಾಯಿತು’ ಎಂದು ಅಧಿಕಾರಿಗಳು ತಿಳಿಸಿದರು.