<p><strong>ಚಡಚಣ</strong>: ಸಮೀಪದ ಹಾಲಳ್ಳಿ ಗ್ರಾಮದ ಹತ್ತಿರ ರಾಜ್ಯ ಹೆದ್ದಾರಿಯಲ್ಲಿ ಲಾರಿಯೊಂದರಲ್ಲಿ ಆಕಸ್ಮಿಕ ಕಾಣಿಸಿಕೊಂಡ ಬೆಂಕಿಯಿಂದ ಭಾಗಶ: ಸುಟ್ಟು ಕರಕಲಾದ ಘಟನೆ ಶುಕ್ರವಾರ ಬೆಳಗಿನ 7 ಗಂಟೆ ಸುಮಾರಿಗೆ ಜರುಗಿದೆ.<br /> <br /> ಸೂರತ್ನಿಂದ ಮಂಗಳೂರಿನ ರಿಲಯನ್ಸ್ ಪಾಲಿಮರ್ ಪ್ರೊಡಕ್ಟ್ ಘಟಕಕ್ಕೆ ಪಿವಿಸಿ ಪೈಪ್ ತಯಾರಿಕಾ ಕಚ್ಚಾ ವಸ್ತುಗಳನ್ನು ಸಾಗಿಸುತ್ತಿದ್ದ ಲಾರಿ ಬೆಂಕಿಗೆ ಆಹುತಿಯಾಗಿದೆ.<br /> <br /> ಬೆಂಕಿ ಆವರಿಸಿಕೊಳ್ಳುತ್ತಿದ್ದಂತೆ ಹಾಲಳ್ಳಿ ಹಾಗೂ ಶಿರಾಡೋಣ ಗ್ರಾಮಸ್ಥರು ಹರಸಾಹಸ ಪಟ್ಟು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಗ್ನಿ ಆಕಸ್ಮಿಕದಲ್ಲಿ ಲಾರಿಯೊಳಗಿದ್ದ ಒಂದು ಲಕ್ಷ ನಗದು. ಅಮೂಲ್ಯ ಕಾಗದ ಪತ್ರಗಳು ಸುಟ್ಟು ಕರಕಲಾಗಿವೆ. ಚಡಚಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .<br /> <br /> ಘಟನೆ ಸಂಭವಿಸಿ ಸುಮಾರು 2 ಗಂಟೆಯ ನಂತರ ಇಂಡಿಯಿಂದ ಅಗ್ನಿ ಶಾಮಕ ವಾಹನ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸುವ ಅಣಕು ಪ್ರದರ್ಶನ ನಡೆಸಿದ ಪ್ರಸಂಗವೂ ನೆರದ ಜನರಿಗೆ ಮುಜುಗರ ಉಂಟು ಮಾಡಿತು.<br /> <br /> ಗ್ರಾಮಸ್ಥರು ಬೆಳಿಗ್ಗೆ ಲಾರಿಯೊಳಗೆ ಬೆಂಕಿ ಕಾಣಿಸಿಕೊಳ್ಳುತ್ತಿರುವಾಗಲೇ ಅಗ್ನಿ ಶಾಮಕ ಸಿಬ್ಬಂದಿಗೆ ದೂರವಾಣಿ ಮಾಡಿ ಪರಸ್ಥಿತಿ ತಿಳಿಸಿದಾಗ ಇಂಡಿಯಿಂದ ಚಡಚಣದ ಹತ್ತಿರದ ಹಾಲಳ್ಳಿ ಗ್ರಾಮಕ್ಕೆ ಬರಲು ಸುಮಾರು 2 ಗಂಟೆ ತೆಗೆದುಕೊಂಡಿದ್ದರು. ಅಷ್ಟೊತ್ತಿಗಾಗಲೇ ಸ್ಥಳೀಯ ಪೊಲೀಸರು ಲಭ್ಯವಿರುವ ನೀರಿನ ಟ್ಯಾಂಕರ್ ಬಳಸಿ ಬೆಂಕಿ ನಂದಿಸಿ ಪರಿಸ್ಥತಿ ನಿಭಾಯಿಸಲು ಯಶಸ್ವಿಯಾಗಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಡಚಣ</strong>: ಸಮೀಪದ ಹಾಲಳ್ಳಿ ಗ್ರಾಮದ ಹತ್ತಿರ ರಾಜ್ಯ ಹೆದ್ದಾರಿಯಲ್ಲಿ ಲಾರಿಯೊಂದರಲ್ಲಿ ಆಕಸ್ಮಿಕ ಕಾಣಿಸಿಕೊಂಡ ಬೆಂಕಿಯಿಂದ ಭಾಗಶ: ಸುಟ್ಟು ಕರಕಲಾದ ಘಟನೆ ಶುಕ್ರವಾರ ಬೆಳಗಿನ 7 ಗಂಟೆ ಸುಮಾರಿಗೆ ಜರುಗಿದೆ.<br /> <br /> ಸೂರತ್ನಿಂದ ಮಂಗಳೂರಿನ ರಿಲಯನ್ಸ್ ಪಾಲಿಮರ್ ಪ್ರೊಡಕ್ಟ್ ಘಟಕಕ್ಕೆ ಪಿವಿಸಿ ಪೈಪ್ ತಯಾರಿಕಾ ಕಚ್ಚಾ ವಸ್ತುಗಳನ್ನು ಸಾಗಿಸುತ್ತಿದ್ದ ಲಾರಿ ಬೆಂಕಿಗೆ ಆಹುತಿಯಾಗಿದೆ.<br /> <br /> ಬೆಂಕಿ ಆವರಿಸಿಕೊಳ್ಳುತ್ತಿದ್ದಂತೆ ಹಾಲಳ್ಳಿ ಹಾಗೂ ಶಿರಾಡೋಣ ಗ್ರಾಮಸ್ಥರು ಹರಸಾಹಸ ಪಟ್ಟು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಗ್ನಿ ಆಕಸ್ಮಿಕದಲ್ಲಿ ಲಾರಿಯೊಳಗಿದ್ದ ಒಂದು ಲಕ್ಷ ನಗದು. ಅಮೂಲ್ಯ ಕಾಗದ ಪತ್ರಗಳು ಸುಟ್ಟು ಕರಕಲಾಗಿವೆ. ಚಡಚಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .<br /> <br /> ಘಟನೆ ಸಂಭವಿಸಿ ಸುಮಾರು 2 ಗಂಟೆಯ ನಂತರ ಇಂಡಿಯಿಂದ ಅಗ್ನಿ ಶಾಮಕ ವಾಹನ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸುವ ಅಣಕು ಪ್ರದರ್ಶನ ನಡೆಸಿದ ಪ್ರಸಂಗವೂ ನೆರದ ಜನರಿಗೆ ಮುಜುಗರ ಉಂಟು ಮಾಡಿತು.<br /> <br /> ಗ್ರಾಮಸ್ಥರು ಬೆಳಿಗ್ಗೆ ಲಾರಿಯೊಳಗೆ ಬೆಂಕಿ ಕಾಣಿಸಿಕೊಳ್ಳುತ್ತಿರುವಾಗಲೇ ಅಗ್ನಿ ಶಾಮಕ ಸಿಬ್ಬಂದಿಗೆ ದೂರವಾಣಿ ಮಾಡಿ ಪರಸ್ಥಿತಿ ತಿಳಿಸಿದಾಗ ಇಂಡಿಯಿಂದ ಚಡಚಣದ ಹತ್ತಿರದ ಹಾಲಳ್ಳಿ ಗ್ರಾಮಕ್ಕೆ ಬರಲು ಸುಮಾರು 2 ಗಂಟೆ ತೆಗೆದುಕೊಂಡಿದ್ದರು. ಅಷ್ಟೊತ್ತಿಗಾಗಲೇ ಸ್ಥಳೀಯ ಪೊಲೀಸರು ಲಭ್ಯವಿರುವ ನೀರಿನ ಟ್ಯಾಂಕರ್ ಬಳಸಿ ಬೆಂಕಿ ನಂದಿಸಿ ಪರಿಸ್ಥತಿ ನಿಭಾಯಿಸಲು ಯಶಸ್ವಿಯಾಗಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>