<p><strong>ಬೆಂಗಳೂರು: </strong>ಅಪಘಾತದಿಂದ ಸಂಭವಿಸುತ್ತಿರುವ ಸಾವಿನ ಸಂಖ್ಯೆಯನ್ನು ತಗ್ಗಿಸುವ ಮಹತ್ವದ ಬೈಕ್ ಆಂಬುಲೆನ್ಸ್ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಚಾಲನೆ ನೀಡಿದರು.</p>.<p>ಬಳಿಕ ಮಾತನಾಡಿದ ಅವರು, ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಧಾರವಾಡದಂಥ ನಗರಗಳಲ್ಲಿ ಇದು ಕಾರ್ಯನಿರ್ವಹಿಸಲಿದೆ. ಇದೇ ರೀತಿ ಜಿಲ್ಲಾ ಕೇಂದ್ರಗಳಲ್ಲಿಯೂ ಕಾರ್ಯನಿರ್ವಹಿಸಲಿವೆ. ಇದೊಂದು ಹೊಸ ಆರಂಭ’ ಎಂದು ನುಡಿದರು.<br /> ನಗರ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಯಿಂದಾಗಿ ಸಂಚಾರ ದಟ್ಟನೆ ಸಮಸ್ಯೆ ಬೆಳೆಯುತ್ತಿದೆ. ಇದರಿಂದ ನಿಗದಿತ ಸಮಯದಲ್ಲಿ ಆಂಬುಲೆನ್ಸ್ಗಳು ಘಟನಾ ಸ್ಥಳಗಳಿಗೆ ತಲುಪಲು ಸಾಧ್ಯವಾಗುತ್ತಿಲ್ಲ. ಈ ಬೈಕ್ ಆಂಬುಲೆನ್ಸ್ಗಳು ಸೂಕ್ತ ಸಮಯಕ್ಕೆ ಘಟನಾ ಸ್ಥಳವನ್ನು ತಲುಪಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.</p>.<p><strong>ಬೈಕ್ ಆಂಬುಲೆನ್ಸ್ ಬಗ್ಗೆ ಒಂದಿಷ್ಟು....</strong></p>.<p>* ಇದು 108 ಸೇವೆಯಡಿಯಲ್ಲಿಯೇ ಕಾರ್ಯನಿರ್ವಹಿಸಲಿದೆ<br /> * ಒಂದು ಬೈಕ್ ಆಂಬುಲೆನ್ಸ್ ಬೆಲೆ 2 ಲಕ್ಷ ರೂಪಾಯಿ<br /> *40 ಮಂದಿಯನ್ನು ತುರ್ತು ಚಿಕಿತ್ಸಾ ನಿಪುಣರನ್ನು ಸೇವೆ ಸಜ್ಜಾಗಿದ್ದಾರೆ<br /> *ಅಗತ್ಯ ಔಷಧಿ, ಆಮ್ಲಜನಕ ಹೀಗೆ ವೈದ್ಯಕೀಯ ಸೌಲಭ್ಯ ಇರುತ್ತದೆ.<br /> *ಈ ಆಂಬುಲೆನ್ಸ್ಗೆ ಮುಂದೆರಡು ಸೈರನ್ ದೀಪ, ಮೈಕ್ ಇರುತ್ತದೆ.<br /> *ಕರೆ ಬಂದೊಡನೆ ಜಿಪಿಎಸ್ನಿಂದ ಘಟನಾ ಪ್ರದೇಶದ ಸಂಚಾರ ದಟ್ಟನೆ ಪರಿಶೀಲಿಸಿ ಈ ಸೇವೆ ಒದ <br /> ಸೇವೆ ಒದಗಿಸುಲಾಗುತ್ತದೆ<br /> * ಆಂಬುಲೆನ್ಸ್ ಚಾಲಕರೇ ಚಿಕಿತ್ಸಕರೂ ಆಗಿರುತ್ತಾರೆ<br /> * ಚಾಲಕರಿಗೆ ಗಾಢ ಬಣ್ಣದ ಜಾಕೇಟ್ ಧರಿಸುತ್ತಾರೆ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಅಪಘಾತದಿಂದ ಸಂಭವಿಸುತ್ತಿರುವ ಸಾವಿನ ಸಂಖ್ಯೆಯನ್ನು ತಗ್ಗಿಸುವ ಮಹತ್ವದ ಬೈಕ್ ಆಂಬುಲೆನ್ಸ್ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಚಾಲನೆ ನೀಡಿದರು.</p>.<p>ಬಳಿಕ ಮಾತನಾಡಿದ ಅವರು, ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಧಾರವಾಡದಂಥ ನಗರಗಳಲ್ಲಿ ಇದು ಕಾರ್ಯನಿರ್ವಹಿಸಲಿದೆ. ಇದೇ ರೀತಿ ಜಿಲ್ಲಾ ಕೇಂದ್ರಗಳಲ್ಲಿಯೂ ಕಾರ್ಯನಿರ್ವಹಿಸಲಿವೆ. ಇದೊಂದು ಹೊಸ ಆರಂಭ’ ಎಂದು ನುಡಿದರು.<br /> ನಗರ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಯಿಂದಾಗಿ ಸಂಚಾರ ದಟ್ಟನೆ ಸಮಸ್ಯೆ ಬೆಳೆಯುತ್ತಿದೆ. ಇದರಿಂದ ನಿಗದಿತ ಸಮಯದಲ್ಲಿ ಆಂಬುಲೆನ್ಸ್ಗಳು ಘಟನಾ ಸ್ಥಳಗಳಿಗೆ ತಲುಪಲು ಸಾಧ್ಯವಾಗುತ್ತಿಲ್ಲ. ಈ ಬೈಕ್ ಆಂಬುಲೆನ್ಸ್ಗಳು ಸೂಕ್ತ ಸಮಯಕ್ಕೆ ಘಟನಾ ಸ್ಥಳವನ್ನು ತಲುಪಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.</p>.<p><strong>ಬೈಕ್ ಆಂಬುಲೆನ್ಸ್ ಬಗ್ಗೆ ಒಂದಿಷ್ಟು....</strong></p>.<p>* ಇದು 108 ಸೇವೆಯಡಿಯಲ್ಲಿಯೇ ಕಾರ್ಯನಿರ್ವಹಿಸಲಿದೆ<br /> * ಒಂದು ಬೈಕ್ ಆಂಬುಲೆನ್ಸ್ ಬೆಲೆ 2 ಲಕ್ಷ ರೂಪಾಯಿ<br /> *40 ಮಂದಿಯನ್ನು ತುರ್ತು ಚಿಕಿತ್ಸಾ ನಿಪುಣರನ್ನು ಸೇವೆ ಸಜ್ಜಾಗಿದ್ದಾರೆ<br /> *ಅಗತ್ಯ ಔಷಧಿ, ಆಮ್ಲಜನಕ ಹೀಗೆ ವೈದ್ಯಕೀಯ ಸೌಲಭ್ಯ ಇರುತ್ತದೆ.<br /> *ಈ ಆಂಬುಲೆನ್ಸ್ಗೆ ಮುಂದೆರಡು ಸೈರನ್ ದೀಪ, ಮೈಕ್ ಇರುತ್ತದೆ.<br /> *ಕರೆ ಬಂದೊಡನೆ ಜಿಪಿಎಸ್ನಿಂದ ಘಟನಾ ಪ್ರದೇಶದ ಸಂಚಾರ ದಟ್ಟನೆ ಪರಿಶೀಲಿಸಿ ಈ ಸೇವೆ ಒದ <br /> ಸೇವೆ ಒದಗಿಸುಲಾಗುತ್ತದೆ<br /> * ಆಂಬುಲೆನ್ಸ್ ಚಾಲಕರೇ ಚಿಕಿತ್ಸಕರೂ ಆಗಿರುತ್ತಾರೆ<br /> * ಚಾಲಕರಿಗೆ ಗಾಢ ಬಣ್ಣದ ಜಾಕೇಟ್ ಧರಿಸುತ್ತಾರೆ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>