ಬೆಂಗಳೂರು: ‘ಕರಾರಿನ ಮೇಲೆ ಪೆಟ್ರೋಲ್ ಬಂಕ್ ಸ್ಥಾಪಿಸುವ ಉದ್ದೇಶಕ್ಕೆ ಇಂಡಿಯನ್ ಆಯಿಲ್ ಕಾರ್ಪೊರೇಷನ್ಗೆ (ಐಒಸಿಎಲ್) ನೀಡಲಾಗಿರುವ ಸ್ಥಳದ ಬಾಡಿಗೆಯ ಸುಮಾರು ₨ 6.97 ಲಕ್ಷವನ್ನು ಸರ್ಕಾರಕ್ಕೆ ಪಾವತಿಸದ ಬೌರಿಂಗ್ ಇನ್ಸ್ಟಿಟ್ಯೂಟ್ಗೆ ನೋಟಿಸ್ ನೀಡಲಾಗಿದೆ’ ಎಂದು ನಗರ ಜಿಲ್ಲಾಧಿಕಾರಿ ವಿ.ಶಂಕರ್ ತಿಳಿಸಿದರು.
‘ಐಒಸಿಎಲ್ಗೆ ನೀಡಿದ್ದ 20 ವರ್ಷಗಳ ಗುತ್ತಿಗೆ ಒಪ್ಪಂದ ಮುಗಿದು ಹೋಗಿದೆ. ಆ ಬಳಿಕ ಸುಮಾರು ₨ 13.94 ಲಕ್ಷ ಬಾಡಿಗೆ ಬಂದಿದೆ. ಅದರಲ್ಲಿ ಶೇ 50ರಷ್ಟು ಸರ್ಕಾರಕ್ಕೆ ಹಾಗೂ ಶೇ 50ರಷ್ಟು ಕ್ಲಬ್ಗೆ ಸೇರಬೇಕು’ ಎಂದು ತಿಳಿಸಿದರು.