ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸುತ್ತಿರುವ ಸಂಭ್ರಮದಲ್ಲಿ ಈ ಅಂಶವನ್ನು ಮರೆಯಕೂಡದು’ ಎಂದು ಕಾಂಗ್ರೆಸ್್ ಶುಕ್ರವಾರ ಎಚ್ಚರಿಕೆ ನೀಡಿದೆ.
‘ಭಯೋತ್ಪಾದನಾ ಜಾಲವನ್ನು ನಾಶಪಡಿಸುವ ಯಾವುದೇ ಸೂಚನೆಯನ್ನು ಪಾಕಿಸ್ತಾನ ನೀಡಿಲ್ಲ. ಆಫ್ಘಾನಿಸ್ತಾನದ ಹೆರಾತ್ನಲ್ಲಿ ಭಾರತದ ಕಾನ್ಸಲೇಟ್್ ಮೇಲೆ ನಡೆದ ದಾಳಿಯೇ ಇದಕ್ಕೆ ಸಾಕ್ಷಿ. ಆಫ್ಘಾನಿಸ್ತಾನದಲ್ಲಿ ತಾಲಿಬಾನ್ಗೆ ಯಾರು ನೆರವು ನೀಡುತ್ತಿದ್ದಾರೆ ಎನ್ನುವುದು ನಮಗೆಲ್ಲರಿಗೂ ಗೊತ್ತಿದೆ’ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಶಕೀಲ್್ ಅಹಮದ್ ಅವರು ಇಲ್ಲಿ ತಿಳಿಸಿದರು.
ಉತ್ತರ ತೃಪ್ತಿಕರವಾಗಿಲ್ಲ: ಭಾರತದ ಇಬ್ಬರು ಪತ್ರಕರ್ತರನ್ನು ದೇಶದಿಂದ ಉಚ್ಚಾಟನೆ ಮಾಡಿದ್ದಕ್ಕೆ ಪಾಕಿಸ್ತಾನ ಕೊಟ್ಟ ಪ್ರತಿಕ್ರಿಯೆ ಸಮಾಧಾನಕರವಾಗಿಲ್ಲ ಎಂದು ಭಾರತ ಶುಕ್ರವಾರ ಹೇಳಿದೆ.