<p><strong>ಮೈಸೂರು:</strong> ರಾಜ್ಯದಲ್ಲಿ 125 ಪದವೀಧರರು ಹಾಗೂ 44 ತಾಂತ್ರಿಕ/ಸ್ನಾತಕೋತ್ತರ ಪದವೀಧರರು ಜೀವನೋಪಾಯಕ್ಕಾಗಿ ಭಿಕ್ಷಾಟನೆಯಲ್ಲಿ ತೊಡಗಿರುವ ಸಂಗತಿ ಬೆಳಕಿಗೆ ಬಂದಿದೆ.<br /> <br /> ಜನಗಣತಿ ಆಯೋಗ ಈಚೆಗೆ ಬಿಡುಗಡೆ ಮಾಡಿರುವ 2011ರ ಜನಗಣತಿಗೆ ಸಂಬಂಧಿಸಿದ ‘ಉದ್ಯೋಗರಹಿತರ ಶಿಕ್ಷಣಮಟ್ಟ ಹಾಗೂ ಮುಖ್ಯ ಚಟುವಟಿಕೆ’ ಎಂಬ ವರದಿಯಲ್ಲಿ ಈ ಅಂಶ ಗೊತ್ತಾಗಿದೆ. ಕರ್ನಾಟಕದಲ್ಲಿರುವ 10,682 ಭಿಕ್ಷುಕರಲ್ಲಿ 2,547 ಮಂದಿ ಅಕ್ಷರಸ್ಥರು ಇದ್ದಾರೆ. ಇವರಲ್ಲಿ 1,446 ಮಂದಿ ಪ್ರೌಢಶಾಲೆ, 459 ಮಂದಿ ಎಸ್ಸೆಸ್ಸೆಲ್ಸಿ/ಪಿಯುಸಿ ಪೂರೈಸಿದವರು, 23 ಮಂದಿ ತಾಂತ್ರಿಕ ಡಿಪ್ಲೊಮಾ ಮಾಡಿದವರು ಸೇರಿದ್ದಾರೆ.<br /> <br /> ರಾಜಧಾನಿಯಲ್ಲಿ ಹೆಚ್ಚು ಭಿಕ್ಷುಕರು: ಬೆಂಗಳೂರು ನಗರದಲ್ಲಿ ಅತ್ಯಧಿಕ ಭಿಕ್ಷುಕ ರಿದ್ದು, ಅವರಲ್ಲಿ 77 ಪದವೀಧರರು ಹಾಗೂ 25 ತಾಂತ್ರಿಕ/ಸ್ನಾತಕೋತ್ತರ ಪದವೀಧರರು ಇರುವುದು ಗೊತ್ತಾಗಿದೆ. ಈ ನಗರಿಯ 206 ಭಿಕ್ಷುಕರು ಮೆಟ್ರಿಕ್/ಪಿಯುಸಿ ಪೂರೈಸಿದ್ದಾರೆ. ನಂತರದ ಸ್ಥಾನದಲ್ಲಿ ಮೈಸೂರು ಜಿಲ್ಲೆ ಇದೆ.<br /> <br /> ಇಲ್ಲಿ ಒಂಬತ್ತು ಮಂದಿ ಪದವೀಧರರು ಹಾಗೂ ಮೂವರು ಸ್ನಾತಕೋತ್ತರ ಪದವೀಧರರು ಇರುವುದು ವರದಿಯ ಅಂಕಿ–ಅಂಶಗಳಿಂದ ತಿಳಿದು ಬಂದಿದೆ. ಬಿ.ಎ ಪದವಿ ಮೊದಲ ವರ್ಷ ಪೂರೈಸಿರುವ ವೆಂಕಟೇಶ್ ಎಂಬುವರು ಮೈಸೂರು ಮೃಗಾಲಯ ಹಾಗೂ ಅಂಬಾವಿಲಾಸ ಅರಮನೆ ಬಳಿ ಭಿಕ್ಷಾಟನೆಯಲ್ಲಿ ತೊಡಗಿದ್ದಾರೆ.<br /> <br /> ‘ಅಪ್ಪ ಸಾವನ್ನಪ್ಪಿದ ಬಳಿಕ ವಿದ್ಯಾಭ್ಯಾಸ ತೊರೆದು ಬೆಂಗಳೂರಿನ ಫ್ಯಾಕ್ಟರಿಯೊಂದರಲ್ಲಿ 5 ವರ್ಷ ದುಡಿದೆ. ಎರಡು ವರ್ಷ ಮೈಸೂರು ನಗರ ಪಾಲಿಕೆಯಲ್ಲಿ ಕೆಲಸ ಮಾಡಿದೆ. ತಿಂಗಳಿಗೆ 4 ಸಾವಿರ ರೂಪಾಯಿ ಸಿಗುತಿತ್ತು. ಕೂಡಿಟ್ಟಿದ್ದ ಹಣ ತಂಗಿ ಮದುವೆಗೆ ಖರ್ಚಾಯಿತು. ಅನಾರೋಗ್ಯಕ್ಕೆ ಒಳಗಾಗಿರುವ ತಾಯಿಯನ್ನು ಆಸ್ಪತ್ರೆಗೆ ಸೇರಿಸಲು ಭಿಕ್ಷಾಟನೆಗಿಳಿದೆ. ಈಗ ತಿಂಗಳಿಗೆ 6–7 ಸಾವಿರ ರೂಪಾಯಿ ದುಡಿಯುತ್ತೇನೆ’ ಎಂದು ವೆಂಕಟೇಶ್ ತಿಳಿಸಿದರು.<br /> <br /> ರಾಜ್ಯದಲ್ಲಿ ನಗರ ಭಾಗದಲ್ಲಿ ಹೆಚ್ಚು ಭಿಕ್ಷುಕರಿರುವುದು ಅಂಕಿ–ಅಂಶಗಳಿಂದ ಗೊತ್ತಾಗಿದೆ. ಕೊಡಗು ಜಿಲ್ಲೆಯಲ್ಲಿ ಕೇವಲ 30 ಭಿಕ್ಷುಕರಿದ್ದಾರೆ. ಇವರಲ್ಲಿ 14 ಮಂದಿ ಅಕ್ಷರಸ್ಥರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ರಾಜ್ಯದಲ್ಲಿ 125 ಪದವೀಧರರು ಹಾಗೂ 44 ತಾಂತ್ರಿಕ/ಸ್ನಾತಕೋತ್ತರ ಪದವೀಧರರು ಜೀವನೋಪಾಯಕ್ಕಾಗಿ ಭಿಕ್ಷಾಟನೆಯಲ್ಲಿ ತೊಡಗಿರುವ ಸಂಗತಿ ಬೆಳಕಿಗೆ ಬಂದಿದೆ.<br /> <br /> ಜನಗಣತಿ ಆಯೋಗ ಈಚೆಗೆ ಬಿಡುಗಡೆ ಮಾಡಿರುವ 2011ರ ಜನಗಣತಿಗೆ ಸಂಬಂಧಿಸಿದ ‘ಉದ್ಯೋಗರಹಿತರ ಶಿಕ್ಷಣಮಟ್ಟ ಹಾಗೂ ಮುಖ್ಯ ಚಟುವಟಿಕೆ’ ಎಂಬ ವರದಿಯಲ್ಲಿ ಈ ಅಂಶ ಗೊತ್ತಾಗಿದೆ. ಕರ್ನಾಟಕದಲ್ಲಿರುವ 10,682 ಭಿಕ್ಷುಕರಲ್ಲಿ 2,547 ಮಂದಿ ಅಕ್ಷರಸ್ಥರು ಇದ್ದಾರೆ. ಇವರಲ್ಲಿ 1,446 ಮಂದಿ ಪ್ರೌಢಶಾಲೆ, 459 ಮಂದಿ ಎಸ್ಸೆಸ್ಸೆಲ್ಸಿ/ಪಿಯುಸಿ ಪೂರೈಸಿದವರು, 23 ಮಂದಿ ತಾಂತ್ರಿಕ ಡಿಪ್ಲೊಮಾ ಮಾಡಿದವರು ಸೇರಿದ್ದಾರೆ.<br /> <br /> ರಾಜಧಾನಿಯಲ್ಲಿ ಹೆಚ್ಚು ಭಿಕ್ಷುಕರು: ಬೆಂಗಳೂರು ನಗರದಲ್ಲಿ ಅತ್ಯಧಿಕ ಭಿಕ್ಷುಕ ರಿದ್ದು, ಅವರಲ್ಲಿ 77 ಪದವೀಧರರು ಹಾಗೂ 25 ತಾಂತ್ರಿಕ/ಸ್ನಾತಕೋತ್ತರ ಪದವೀಧರರು ಇರುವುದು ಗೊತ್ತಾಗಿದೆ. ಈ ನಗರಿಯ 206 ಭಿಕ್ಷುಕರು ಮೆಟ್ರಿಕ್/ಪಿಯುಸಿ ಪೂರೈಸಿದ್ದಾರೆ. ನಂತರದ ಸ್ಥಾನದಲ್ಲಿ ಮೈಸೂರು ಜಿಲ್ಲೆ ಇದೆ.<br /> <br /> ಇಲ್ಲಿ ಒಂಬತ್ತು ಮಂದಿ ಪದವೀಧರರು ಹಾಗೂ ಮೂವರು ಸ್ನಾತಕೋತ್ತರ ಪದವೀಧರರು ಇರುವುದು ವರದಿಯ ಅಂಕಿ–ಅಂಶಗಳಿಂದ ತಿಳಿದು ಬಂದಿದೆ. ಬಿ.ಎ ಪದವಿ ಮೊದಲ ವರ್ಷ ಪೂರೈಸಿರುವ ವೆಂಕಟೇಶ್ ಎಂಬುವರು ಮೈಸೂರು ಮೃಗಾಲಯ ಹಾಗೂ ಅಂಬಾವಿಲಾಸ ಅರಮನೆ ಬಳಿ ಭಿಕ್ಷಾಟನೆಯಲ್ಲಿ ತೊಡಗಿದ್ದಾರೆ.<br /> <br /> ‘ಅಪ್ಪ ಸಾವನ್ನಪ್ಪಿದ ಬಳಿಕ ವಿದ್ಯಾಭ್ಯಾಸ ತೊರೆದು ಬೆಂಗಳೂರಿನ ಫ್ಯಾಕ್ಟರಿಯೊಂದರಲ್ಲಿ 5 ವರ್ಷ ದುಡಿದೆ. ಎರಡು ವರ್ಷ ಮೈಸೂರು ನಗರ ಪಾಲಿಕೆಯಲ್ಲಿ ಕೆಲಸ ಮಾಡಿದೆ. ತಿಂಗಳಿಗೆ 4 ಸಾವಿರ ರೂಪಾಯಿ ಸಿಗುತಿತ್ತು. ಕೂಡಿಟ್ಟಿದ್ದ ಹಣ ತಂಗಿ ಮದುವೆಗೆ ಖರ್ಚಾಯಿತು. ಅನಾರೋಗ್ಯಕ್ಕೆ ಒಳಗಾಗಿರುವ ತಾಯಿಯನ್ನು ಆಸ್ಪತ್ರೆಗೆ ಸೇರಿಸಲು ಭಿಕ್ಷಾಟನೆಗಿಳಿದೆ. ಈಗ ತಿಂಗಳಿಗೆ 6–7 ಸಾವಿರ ರೂಪಾಯಿ ದುಡಿಯುತ್ತೇನೆ’ ಎಂದು ವೆಂಕಟೇಶ್ ತಿಳಿಸಿದರು.<br /> <br /> ರಾಜ್ಯದಲ್ಲಿ ನಗರ ಭಾಗದಲ್ಲಿ ಹೆಚ್ಚು ಭಿಕ್ಷುಕರಿರುವುದು ಅಂಕಿ–ಅಂಶಗಳಿಂದ ಗೊತ್ತಾಗಿದೆ. ಕೊಡಗು ಜಿಲ್ಲೆಯಲ್ಲಿ ಕೇವಲ 30 ಭಿಕ್ಷುಕರಿದ್ದಾರೆ. ಇವರಲ್ಲಿ 14 ಮಂದಿ ಅಕ್ಷರಸ್ಥರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>