‘ಕಾರ್ಮಿಕರಿಗೆ ಜಿಲ್ಲಾಡಳಿತದಿಂದ ತಲಾ ₹ 1 ಸಾವಿರ ಕೊಟ್ಟು, ಅವರನ್ನು ವಿಶೇಷ ರೈಲಿನಲ್ಲಿ ಒಡಿಶಾಗೆ ಕಳುಹಿಸಲಾಗುವುದು’ ಎಂದು ಹೇಳಿದರು.
‘ದಿನಕ್ಕೆ ₹ 350–400 ಕೂಲಿ ಕೊಡಲಾಗುವುದು ಎಂದು ನಮ್ಮನ್ನು ಕರೆತಂದು ಕೆಲಸ ಮಾಡಿಸಿಕೊಳ್ಳಲಾಗುತ್ತಿತ್ತು. ವಾಸಕ್ಕೆ ಮನೆ, ಶೌಚಾಲಯ ಸೇರಿದಂತೆ ಯಾವುದೇ ಮೂಲ ಸೌಕರ್ಯ ಕಲ್ಪಿಸಿರಲಿಲ್ಲ’ ಎಂದು ಕಾರ್ಮಿಕರೊಬ್ಬರು ಹೇಳಿದರು.
ರಕ್ಷಿಸಲಾದ ಮಕ್ಕಳು 15 ವರ್ಷಕ್ಕಿಂತ ಕೆಳಗಿನವರು. ಇಟ್ಟಿಗೆ ಕಾರ್ಖಾನೆಯ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರುಗಳು ತಿಳಿಸಿದರು.