ಚೆನ್ನೈ (ಐಎಎನ್ಎಸ್): ತಮಗೆ ನೈತಿಕ ಬೆಂಬಲ ನೀಡಿದ ನಟ ರಜನಿಕಾಂತ್ ಮತ್ತು ಕೇಂದ್ರ ಸಚಿವೆ ಮೇನಕಾ ಗಾಂಧಿ ಅವರಿಗೆ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಕೃತಜ್ಞತೆ ಹೇಳಿದ್ದಾರೆ.
‘ಕೇಂದ್ರ ಸಚಿವರಾಗಿ ನಿಮ್ಮ ಬಿಡುವಿಲ್ಲದ ಕೆಲಸದ ನಡುವೆಯೂ ನನ್ನ ಕುರಿತು ಯೋಚಿಸಲು ಸಮಯ ಹೊಂದಿಸಿಕೊಂಡು ಪತ್ರ ಬರೆದಿದ್ದೀರಿ ಇದಕ್ಕೆ ಅಭಾರಿ’ ಎಂದು ಜಯಲಲಿತಾ ಹೇಳಿದ್ದಾರೆ.
ರಜನಿಕಾಂತ್ ಅವರಿಗೆ ಜಯಲಲಿತಾ, ‘ನನ್ನ ಬಗ್ಗೆ ಕಾಳಜಿ ವ್ಯಕ್ತಪಡಿಸಿದ್ದಕ್ಕಾಗಿ ಕೃತಜ್ಞತೆ. ನಿಮಗೆ ದೇವರು ದೀರ್ಘಾಯಸ್ಸು, ಆರೋಗ್ಯ ಮತ್ತು ಎಲ್ಲಾ ಚಟುವಟಿಕೆಗಳಲ್ಲಿಯೂ ಯಶಸ್ಸು ನೀಡಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ಬರೆದಿದ್ದಾರೆ.