ಮೈಸೂರಿನ ಅಂಬಾವಿಲಾಸ ಅರಮನೆಯಲ್ಲಿ ಗುರುವಾರ ಬೆಳಿಗ್ಗೆ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಪಟ್ಟಾಭಿಷೇಕ ನಡೆಯಿತು. ರಾತ್ರಿ ಅರಮನೆಯ ದರ್ಬಾರ್ ಹಾಲ್ನಲ್ಲಿ ಆರತಕ್ಷತೆಯ ಸಲುವಾಗಿ ಬೆಳ್ಳಿ ಭದ್ರಾಸನದ ಮೇಲೆ ಆಸೀನರಾಗಿದ್ದ ಯದುವೀರ. ಯದುವೀರ ಅವರ ಹೆತ್ತತಾಯಿ ತ್ರಿಪುರಸುಂದರಿ ದೇವಿ ಹಾಗೂ ಅವರ ಸೋದರಿಯರು ಮತ್ತು ರಾಜ ವಂಶಸ್ಥೆ ಪ್ರಮೋದಾ ದೇವಿ ಇದ್ದಾರೆ ಪ್ರಜಾವಾಣಿ ವಾರ್ತೆ