ಇದಕ್ಕೂ ಮುನ್ನ ಅಧಿವೇಶನ ಆರಂಭವಾಗುತ್ತಿದ್ದಂತೆಯೇ ಹಂಗಾಮಿ ಸ್ಪೀಕರ್ ಕಮಲ್ನಾಥ್ ಅವರು ಮುಂಡೆ ನಿಧನಕ್ಕೆ ಸಂತಾಪ ಸೂಚಿಸಿದರು.ಬಳಿಕ, ಮಾತನಾಡಿದ ಅವರು ಸಂವಿಧಾನಾತ್ಮಕವಾಗಿ ಜನತೆ ನಮ್ಮನ್ನು ಆರಿಸಿದ್ದು, ದೇಶದ ಕ್ಷೇಮಾಭಿವೃದ್ಧಿಯ ಬಹುದೊಡ್ಡ ಜವಾಬ್ದಾರಿ ವಹಿಸಿದ್ದಾರೆ ಎಂದರು.
ನಂತರ ಕಾರ್ಯದರ್ಶಿ ಜನರಲ್ ಪಿ. ಶ್ರೀಧರನ್ ಅವರು 16ನೇ ಲೋಕಸಭೆಗೆ ಆಯ್ಕೆಯಾದ ನೂತನ ಸದಸ್ಯರುಗಳ ಪಟ್ಟಿಯನ್ನು ಸದನದಲ್ಲಿ ಮಂಡಿಸಿದರು. ಸದಸ್ಯರ ಒಪ್ಪಿಗೆ ಮೇರೆಗೆ ಸ್ಪೀಕರ್ ಅವರು ಪ್ರಮಾಣವಚನ ಬೋಧನೆಯನ್ನು ಗುರುವಾರಕ್ಕೆ ಮುಂದೂಡಿದರು.