ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ತಮ್ಮ ತಮ್ಮ ಜ್ಯೋತಿಷಿಗಳ ಸಲಹೆಯಂತೆ ನಿರ್ದಿಷ್ಟ ಮುಹೂರ್ತದಲ್ಲಿ ನಾಮಪತ್ರ ಸಲ್ಲಿಸುವುದು ಸಾಮಾನ್ಯ. ಗುರುವಾರ ನಡೆದ ಚುನಾವಣೆಯ ಸಂದರ್ಭದಲ್ಲಿ ಕೇಂದ್ರದ ಸಚಿವರೊಬ್ಬರು ವಾಸ್ತು ಪ್ರಕಾರ ಮತಯಂತ್ರದ ದಿಕ್ಕನ್ನು ಬದಲಿಸಿ ಮತ ಚಲಾಯಿಸಿರುವುದು ಮೌಢ್ಯದ ಪರಮಾವಧಿ.
ಸಚಿವರ ಕೋರಿಕೆಯಂತೆ ಮತಯಂತ್ರ ಇರಿಸಿದ ಟೇಬಲನ್ನು ಸರಿಸಲು ಸಹಕರಿಸಿದ ಸಿಬ್ಬಂದಿಯನ್ನು ಚುನಾವಣಾ ಅಧಿಕಾರಿ ತರಾಟೆಗೆ ತೆಗೆದುಕೊಂಡಿರುವುದು ಸರಿಯಾದುದು. ಮೂಢನಂಬಿಕೆ ವಿರೋಧಿ ಕಾನೂನು ಜಾರಿಗೊಳಿಸಲು ಚಿಂತಿಸುತ್ತಿರುವ ಆಡಳಿತಾರೂಢ ಪಕ್ಷಕ್ಕೆ ಸೇರಿದ ಅಭ್ಯರ್ಥಿಯ ವರ್ತನೆ ಖಂಡನೀಯ. ರಾಜಕಾರಣಿಗಳು ತಮ್ಮ ಗ್ರಹಗತಿಗೆ ಸಂಬಂಧಿಸಿ ಸಾರ್ವಜನಿಕ ಆಸ್ತಿ ವಿರೂಪಗೊಳಿಸುವುದು ನಿಲ್ಲಲಿ.