ಬೆಂಗಳೂರು: ಮೂಢನಂಬಿಕೆ ಆಚರಣೆಗಳನ್ನು ಉತ್ತೇಜಿಸುವ, ಪ್ರಚಾರ ಮಾಡುವ ಮತ್ತು ಆಚರಿಸುವ ಯಾವುದೇ ವ್ಯಕ್ತಿಗೆ ಜೈಲು ಶಿಕ್ಷೆ ವಿಧಿಸುವ ಮಸೂದೆಯನ್ನು ರಾಜ್ಯ ಸರ್ಕಾರ ಸಿದ್ಧಪಡಿಸಿದೆ.
ಕರ್ನಾಟಕ ಮೂಢನಂಬಿಕೆ ಆಚರಣೆಗಳ ಪ್ರತಿಬಂಧಕ ಮತ್ತು ನಿರ್ಮೂಲನೆ ಕರಡು ಮಸೂದೆ ಬಗ್ಗೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಲಾಯಿತು.
ಈ ಅಧಿವೇಶನದಲ್ಲೇ ಮಂಡಿಸುವ ಸಲುವಾಗಿ ಸಮಾಜ ಕಲ್ಯಾಣ ಇಲಾಖೆ ಮಸೂದೆ ಕರಡನ್ನು ಸಂಪುಟ ಸಭೆ ಮುಂದೆ ಮಂಡಿಸಿತ್ತು. ಆದರೆ ಇದನ್ನು ಕಾನೂನು ಇಲಾಖೆ ಮೂಲಕ ಸಂಪುಟ ಸಭೆಗೆ ತರದಿದ್ದ ಕಾರಣ, ಕಾನೂನು ಇಲಾಖೆಯ ಪರಿಶೀಲನಾ ಸಮಿತಿಗೆ ಒಪ್ಪಿಸಲು ಸಂಪುಟ ಸಭೆ ತೀರ್ಮಾನಿಸಿದೆ.
ಇದರಿಂದ ಈ ಅಧಿವೇಶನದಲ್ಲಿಯೇ ಮಸೂದೆಯನ್ನು ಮಂಡಿಸಿ, ಒಪ್ಪಿಗೆ ಪಡೆಯಲಾಗುತ್ತದೆ ಎನ್ನುವ ಊಹಾಪೋಹಗಳಿಗೆ ತೆರೆಬಿದ್ದಂತೆ ಆಗಿದೆ.
ಪರಿಶೀಲನಾ ಸಮಿತಿಯ ಅಧ್ಯಕ್ಷರೂ ಆದ ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರು ಪರಾಮರ್ಶೆ ನಡೆಸಿದ ನಂತರವೇ ಪುನಃ ಈ ಕರಡು ಮಸೂದೆಯನ್ನು ಸಂಪುಟ ಸಭೆಯ ಮುಂದೆ ತರುವ ಸಾಧ್ಯತೆ ಇದೆ.
*
ಕರಡು ಮಸೂದೆಯಲ್ಲಿ ಏನಿದೆ?
* ಮೂಢನಂಬಿಕೆ ಪ್ರತಿಬಂಧಿಸುವ, ನಿರ್ಮೂಲನೆ ಮಾಡುವ ಮತ್ತು ನರಬಲಿ ನಿಷೇಧಿಸುವ ಹಾಗೂ ಸಮಾಜದಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವ ಉದ್ದೇಶ