ಶ್ರೀನಗರ (ಐಎಎನ್ಎಸ್): ಬುದ್ಗಂ ಜಿಲ್ಲೆಯಲ್ಲಿ ನವೆಂಬರ್ 3ರಂದು ನಡೆದ ಇಬ್ಬರು ಯುವಕರ ಹತ್ಯೆ ಪ್ರಕರಣದಲ್ಲಿ 9 ಸೈನಿಕರು ತಪ್ಪಿತಸ್ಥರು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದ್ದು, ಇವರನ್ನು ಸೇನಾ ನ್ಯಾಯಾಲಯದ ವಿಚಾರಣೆಗೆ ಒಳಪಡಿಸಲಾಗುತ್ತದೆ ಎಂದು ಸೇನೆಯ ಮೂಲಗಳು ತಿಳಿಸಿವೆ.
ಚೆತ್ತೆರ್ಗಾಮ್ ಪ್ರದೇಶದಲ್ಲಿ ನಡೆದ ಗೋಲಿಬಾರ್ಗೆ ಸಂಬಂಧಿಸಿದಂತೆ 53ನೇ ರಾಷ್ಟ್ರೀಯ ರೈಫಲ್ಸ್ನ ಅಧಿಕಾರಿಯೂ ಸೇರಿದಂತೆ ಒಂಬತ್ತು ಸೈನಿಕರು ತಪ್ಪೆಸಗಿದ್ದಾರೆ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.