ಬೆಂಗಳೂರು: ಸರ್ಕಾರಿ ಶಾಲೆ ಅಭಿವೃದ್ಧಿಗೆ ನೆರವಾಗಿರುವ ಯುವ ಸಂಘಟನೆಗಳಿಗೆ ‘ನಮ್ಮೂರ ಶಾಲೆಗೆ ನಮ್ಮ ಯುವಜನರು’ ಕಾರ್ಯ ಕ್ರಮದಡಿ ಪ್ರೋತ್ಸಾಹಧನ ನೀಡಲು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಅರ್ಜಿ ಆಹ್ವಾನಿಸಿದೆ.
ಜಿಲ್ಲೆಯ ಯಾವುದಾದರೂ ಒಂದು ತಾಲ್ಲೂಕಿನ ಒಂದು ಸಂಘಕ್ಕೆ ₹ 1ಲಕ್ಷ ಪ್ರೋತ್ಸಾಹಧನ ಸಿಗಲಿದೆ. ಅರ್ಹ ಸಂಸ್ಥೆಗಳು 2015ನೇ ಜುಲೈನಿಂದ 2016ರ ಜೂನ್ವರೆಗೆ ಕೈಗೊಂಡಿರುವ ಕಾರ್ಯ ಚಟುವಟಿಕೆ ಕುರಿತ ವರದಿ ಯೊಂದಿಗೆ ಅರ್ಜಿ ಸಲ್ಲಿಸಬಹುದು.
ಕಂಠೀರವ ಕ್ರೀಡಾಂಗಣದ ಲ್ಲಿರುವ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಯಿಂದ ಅರ್ಜಿ ನಮೂನೆ ಪಡೆಯಬಹುದು. ವಿವರಗಳಿಗೆ 080–22239771 ಅಥವಾ 9480886470 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.