<p><strong>ಸನಾ (ಎಪಿ): </strong>ಯೆಮನ್ನಲ್ಲಿ ಸೌದಿ ನೇತೃತ್ವದ ವೈಮಾನಿಕ ದಾಳಿ ಹಾಗೂ ಶಿಯಾ ಬಂಡುಕೋರರ ನಡುವಣ ಸಂಘರ್ಷ ಮುಂದುವರಿದ್ದು, ಈವರೆಗೂ ಮಕ್ಕಳು ಸೇರಿದಂತೆ 560 ಜನರು ಸಾವನ್ನಪ್ಪಿದ್ದಾರೆ. ಸುಮಾರು 1700 ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ.</p>.<p>ಮತ್ತೊಂದೆಡೆ, ಯೆಮನ್ಗೆ ತೆರಳಲು ಸಿದ್ಧವಿರುವ ಟನ್ಗಟ್ಟಲೇ ಅಗತ್ಯ ಔಷಧಿ ಅನುಮತಿ ನಿರೀಕ್ಷೆಯಲ್ಲಿದೆ. ಅದು ತಲುಪದಿದ್ದರೆ ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆಗಳಿವೆ ಎಂದು ವಿಶ್ವ ಆರೋಗ್ಯ ಕಾರ್ಯಕರ್ತರು ಎಚ್ಚರಿಸಿದ್ದಾರೆ.</p>.<p>ಸಂಘರ್ಷ ಉಲ್ಬಣಿಸಿದ್ದರಿಂದ ಕಳೆದ ಮೂರು ವಾರಗಳಲ್ಲಿ 10 ಲಕ್ಷಕ್ಕೂ ಅಧಿಕ ಜನರು ಮನೆಗಳನ್ನು ತೊರೆದಿದ್ದಾರೆ ಎಂದು ವಿಶ್ವ ಆರೋಗ್ಯ ಸಂಘಟನೆ ತಿಳಿಸಿದೆ.<br /> <br /> 17 ಟನ್ಗಳಷ್ಟು ಔಷಧಿ ಹೊತ್ತ ಸರಕು ಸಾಗಣೆ ವಿಮಾನ ಜೋರ್ಡಾನ್ ರಾಜಧಾನಿ ಅಮನ್ನಲ್ಲಿ ಯೆಮನ್ ಪ್ರವೇಶಿಸಿಲು ಅನುಮತಿಗಾಗಿ ಕಾಯುತ್ತಿದೆ ಎಂದು ಜಿನೆವಾ ಮೂಲದ ರೆಡ್ ಕ್ರಾಸ್ನ ಅಂತರರಾಷ್ಟ್ರೀಯ ಸಮಿತಿಯ ವಕ್ತಾರೆ ಸಿತಾರಾ ಜಬೀನ್ ತಿಳಿಸಿದ್ದಾರೆ.</p>.<p>‘ಈ ಔಷಧಿಗಳು ಯೆಮನ್ ತಲುಪದಿದ್ದರೆ ಮತ್ತಷ್ಟು ಜನರು ಸಾವನ್ನಪ್ಪುವ ಭೀತಿ ನಮ್ಮನ್ನು ಕಾಡುತಿದೆ’ ಎಂದೂ ಅವರು ಪ್ರತಿಕ್ರಿಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸನಾ (ಎಪಿ): </strong>ಯೆಮನ್ನಲ್ಲಿ ಸೌದಿ ನೇತೃತ್ವದ ವೈಮಾನಿಕ ದಾಳಿ ಹಾಗೂ ಶಿಯಾ ಬಂಡುಕೋರರ ನಡುವಣ ಸಂಘರ್ಷ ಮುಂದುವರಿದ್ದು, ಈವರೆಗೂ ಮಕ್ಕಳು ಸೇರಿದಂತೆ 560 ಜನರು ಸಾವನ್ನಪ್ಪಿದ್ದಾರೆ. ಸುಮಾರು 1700 ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ.</p>.<p>ಮತ್ತೊಂದೆಡೆ, ಯೆಮನ್ಗೆ ತೆರಳಲು ಸಿದ್ಧವಿರುವ ಟನ್ಗಟ್ಟಲೇ ಅಗತ್ಯ ಔಷಧಿ ಅನುಮತಿ ನಿರೀಕ್ಷೆಯಲ್ಲಿದೆ. ಅದು ತಲುಪದಿದ್ದರೆ ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆಗಳಿವೆ ಎಂದು ವಿಶ್ವ ಆರೋಗ್ಯ ಕಾರ್ಯಕರ್ತರು ಎಚ್ಚರಿಸಿದ್ದಾರೆ.</p>.<p>ಸಂಘರ್ಷ ಉಲ್ಬಣಿಸಿದ್ದರಿಂದ ಕಳೆದ ಮೂರು ವಾರಗಳಲ್ಲಿ 10 ಲಕ್ಷಕ್ಕೂ ಅಧಿಕ ಜನರು ಮನೆಗಳನ್ನು ತೊರೆದಿದ್ದಾರೆ ಎಂದು ವಿಶ್ವ ಆರೋಗ್ಯ ಸಂಘಟನೆ ತಿಳಿಸಿದೆ.<br /> <br /> 17 ಟನ್ಗಳಷ್ಟು ಔಷಧಿ ಹೊತ್ತ ಸರಕು ಸಾಗಣೆ ವಿಮಾನ ಜೋರ್ಡಾನ್ ರಾಜಧಾನಿ ಅಮನ್ನಲ್ಲಿ ಯೆಮನ್ ಪ್ರವೇಶಿಸಿಲು ಅನುಮತಿಗಾಗಿ ಕಾಯುತ್ತಿದೆ ಎಂದು ಜಿನೆವಾ ಮೂಲದ ರೆಡ್ ಕ್ರಾಸ್ನ ಅಂತರರಾಷ್ಟ್ರೀಯ ಸಮಿತಿಯ ವಕ್ತಾರೆ ಸಿತಾರಾ ಜಬೀನ್ ತಿಳಿಸಿದ್ದಾರೆ.</p>.<p>‘ಈ ಔಷಧಿಗಳು ಯೆಮನ್ ತಲುಪದಿದ್ದರೆ ಮತ್ತಷ್ಟು ಜನರು ಸಾವನ್ನಪ್ಪುವ ಭೀತಿ ನಮ್ಮನ್ನು ಕಾಡುತಿದೆ’ ಎಂದೂ ಅವರು ಪ್ರತಿಕ್ರಿಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>