<p>ಶ್ರೀರಂಗಪಟ್ಟಣ: ಕಾವೇರಿ ನದಿಯಲ್ಲಿ ನೀರಿನಮಟ್ಟ ಇಳಿಕೆಯಾಗಿರುವುದರಿಂದ ಕೆಆರ್ಎಸ್ ಜಲಾಶಯದ ತಗ್ಗಿನಲ್ಲಿರುವ ಪ್ರಸಿದ್ಧ ರಂಗನತಿಟ್ಟು ಪಕ್ಷಿಧಾಮದಲ್ಲಿ ‘ದೋಣಿ ವಿಹಾರ’ ಮಂಗಳವಾರ ಪುನರಾರಂಭವಾಗಿದೆ.<br /> <br /> ನದಿಯಲ್ಲಿ ನೀರಿನ ಹರಿವು ಹೆಚ್ಚು ಇದ್ದ ಕಾರಣ ಜುಲೈ 16ರಿಂದ ದೋಣಿ ವಿಹಾರ ಸ್ಥಗಿತಗೊಂಡಿತ್ತು. ಈಗ ಪಕ್ಷಿಧಾಮದಲ್ಲಿರುವ ಎಲ್ಲ ದೋಣಿಗಳು ನದಿಗೆ ಇಳಿದಿವೆ. 2 ಮರದ ದೋಣಿಗಳು ಹಾಗೂ 10 ಫೈಬರ್ ದೋಣಿಗಳು ಪಕ್ಷಿಧಾಮದಲ್ಲಿ ವಿಹಾರ ಆರಂಭಿಸಿವೆ. ಅರಣ್ಯ ಇಲಾಖೆ (ವನ್ಯಜೀವಿ ವಿಭಾಗ) ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ಸೂಚನೆ ಮೇರೆಗೆ 27 ದಿನಗಳ ಬಳಿಕ ಮತ್ತೆ ದೋಣಿ ವಿಹಾರವನ್ನು ಶುರು ಮಾಡಲಾಗಿದೆ.<br /> <br /> ದೇಶ– ವಿದೇಶಗಳ 250ಕ್ಕೂ ಹೆಚ್ಚು ಪ್ರವಾಸಿಗರು ಮಂಗಳವಾರ ದೋಣಿ ವಿಹಾರದ ಮೂಲಕ ಪಕ್ಷಿ ವೀಕ್ಷಣೆ ಮಾಡಿದ್ದಾರೆ ಎಂದು ರಂಗನತಿಟ್ಟು ಪಕ್ಷಿಧಾಮದ ಉಪ ವಲಯ ಅರಣ್ಯಾಧಿಕಾರಿ ಲಕ್ಷ್ಮೀಶ್ ‘ಪ್ರಜಾವಾಣಿ’ಗೆ ತಿಳಿಸಿದರು.<br /> ಪಕ್ಷಿಧಾಮದಲ್ಲಿ ಸದ್ಯ ಐಬಿಸ್, ಇಗ್ರೆಟ್್ಸ, ಕಾರ್ಮೊರೆಂಟ್, ಹೆರಾನ್ ಮಾತ್ರವಲ್ಲದೆ, ಸ್ನೇಕ್ ಬರ್ಡ್ನಂತಹ ಅಪರೂಪದ ಪಕ್ಷಿಗಳು ಕಾಣಸಿಗುತ್ತವೆ ಎಂದು ಅವರು ಹೇಳಿದರು.<br /> <br /> <strong>₨ 10 ಲಕ್ಷ ನಷ್ಟ: </strong>ಪಕ್ಷಿಧಾಮದಲ್ಲಿ 27 ದಿನಗಳ ಕಾಲ ದೋಣಿ ವಿಹಾರ ಸ್ಥಗಿತಗೊಂಡಿದ್ದರಿಂದ ಅರಣ್ಯ ಇಲಾಖೆಗೆ ₨ 10 ಲಕ್ಷ ನಷ್ಟ ಉಂಟಾಗಿದೆ. ಹಿಂದಿನ ವರ್ಷ ಕೂಡ ಜುಲೈ 13ರಿಂದ ಆ. 16ರವರೆಗೆ ದೋಣಿ ವಿಹಾರ ಸ್ಥಗಿತಗೊಂಡು ₨ 12 ಲಕ್ಷ ನಷ್ಟವಾಗಿತ್ತು ಎಂದು ಲಕ್ಷ್ಮೀಶ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಶ್ರೀರಂಗಪಟ್ಟಣ: ಕಾವೇರಿ ನದಿಯಲ್ಲಿ ನೀರಿನಮಟ್ಟ ಇಳಿಕೆಯಾಗಿರುವುದರಿಂದ ಕೆಆರ್ಎಸ್ ಜಲಾಶಯದ ತಗ್ಗಿನಲ್ಲಿರುವ ಪ್ರಸಿದ್ಧ ರಂಗನತಿಟ್ಟು ಪಕ್ಷಿಧಾಮದಲ್ಲಿ ‘ದೋಣಿ ವಿಹಾರ’ ಮಂಗಳವಾರ ಪುನರಾರಂಭವಾಗಿದೆ.<br /> <br /> ನದಿಯಲ್ಲಿ ನೀರಿನ ಹರಿವು ಹೆಚ್ಚು ಇದ್ದ ಕಾರಣ ಜುಲೈ 16ರಿಂದ ದೋಣಿ ವಿಹಾರ ಸ್ಥಗಿತಗೊಂಡಿತ್ತು. ಈಗ ಪಕ್ಷಿಧಾಮದಲ್ಲಿರುವ ಎಲ್ಲ ದೋಣಿಗಳು ನದಿಗೆ ಇಳಿದಿವೆ. 2 ಮರದ ದೋಣಿಗಳು ಹಾಗೂ 10 ಫೈಬರ್ ದೋಣಿಗಳು ಪಕ್ಷಿಧಾಮದಲ್ಲಿ ವಿಹಾರ ಆರಂಭಿಸಿವೆ. ಅರಣ್ಯ ಇಲಾಖೆ (ವನ್ಯಜೀವಿ ವಿಭಾಗ) ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ಸೂಚನೆ ಮೇರೆಗೆ 27 ದಿನಗಳ ಬಳಿಕ ಮತ್ತೆ ದೋಣಿ ವಿಹಾರವನ್ನು ಶುರು ಮಾಡಲಾಗಿದೆ.<br /> <br /> ದೇಶ– ವಿದೇಶಗಳ 250ಕ್ಕೂ ಹೆಚ್ಚು ಪ್ರವಾಸಿಗರು ಮಂಗಳವಾರ ದೋಣಿ ವಿಹಾರದ ಮೂಲಕ ಪಕ್ಷಿ ವೀಕ್ಷಣೆ ಮಾಡಿದ್ದಾರೆ ಎಂದು ರಂಗನತಿಟ್ಟು ಪಕ್ಷಿಧಾಮದ ಉಪ ವಲಯ ಅರಣ್ಯಾಧಿಕಾರಿ ಲಕ್ಷ್ಮೀಶ್ ‘ಪ್ರಜಾವಾಣಿ’ಗೆ ತಿಳಿಸಿದರು.<br /> ಪಕ್ಷಿಧಾಮದಲ್ಲಿ ಸದ್ಯ ಐಬಿಸ್, ಇಗ್ರೆಟ್್ಸ, ಕಾರ್ಮೊರೆಂಟ್, ಹೆರಾನ್ ಮಾತ್ರವಲ್ಲದೆ, ಸ್ನೇಕ್ ಬರ್ಡ್ನಂತಹ ಅಪರೂಪದ ಪಕ್ಷಿಗಳು ಕಾಣಸಿಗುತ್ತವೆ ಎಂದು ಅವರು ಹೇಳಿದರು.<br /> <br /> <strong>₨ 10 ಲಕ್ಷ ನಷ್ಟ: </strong>ಪಕ್ಷಿಧಾಮದಲ್ಲಿ 27 ದಿನಗಳ ಕಾಲ ದೋಣಿ ವಿಹಾರ ಸ್ಥಗಿತಗೊಂಡಿದ್ದರಿಂದ ಅರಣ್ಯ ಇಲಾಖೆಗೆ ₨ 10 ಲಕ್ಷ ನಷ್ಟ ಉಂಟಾಗಿದೆ. ಹಿಂದಿನ ವರ್ಷ ಕೂಡ ಜುಲೈ 13ರಿಂದ ಆ. 16ರವರೆಗೆ ದೋಣಿ ವಿಹಾರ ಸ್ಥಗಿತಗೊಂಡು ₨ 12 ಲಕ್ಷ ನಷ್ಟವಾಗಿತ್ತು ಎಂದು ಲಕ್ಷ್ಮೀಶ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>