ತಿರುವನಂತಪುರ (ಪಿಟಿಐ): 2012ರಲ್ಲಿ ನಡೆದ ರತ್ನ ವ್ಯಾಪಾರಿಯೊಬ್ಬರ ಹತ್ಯೆಗೆ ಸಂಬಂಧಿಸಿ ಮೂರು ಜನ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಸೇರಿ ಒಟ್ಟು ಐವರು ತಪ್ಪಿತಸ್ಥರು ಎಂದು ಇಲ್ಲಿನ ತ್ವರಿತ ಗತಿ ನ್ಯಾಯಾಲಯ ಸೋಮವಾರ ತೀರ್ಮಾನಿಸಿದೆ.
ಆರೋಪಿಗಳಾದ ರಖಿಲ್, ರಾಜೇಶ್, ಜೋಸೆಫ್, ಎಂ. ಜಿತೇಶ್ ಮತ್ತು ಅಜೀಶ್ ತಪ್ಪಿತಸ್ಥರು ಎಂದು ನ್ಯಾಯಾಲಯ ಪರಿಗಣಿಸಿದೆ. ಕೊಲೆಯಾದ ರತ್ನ ವ್ಯಾಪಾರಿ ಹರಿಹರ ವರ್ಮರ ಪರಿಚಯವಿದ್ದ ಆರನೇ ಆರೋಪಿ ಹರಿದಾಸ್ ಅವರನ್ನು ಪ್ರಕರಣದಿಂದ ಖುಲಾಸೆ ಮಾಡಿದೆ.
ಅಪರಾಧಿಗಳ ಶಿಕ್ಷೆಯ ಪ್ರಮಾಣವನ್ನು ನ್ಯಾಯಾಲಯ ಮಂಗಳವಾರ ಘೋಷಿಸಲಿದೆ.