ನವದೆಹಲಿ (ಪಿಟಿಐ): ಮುಂಬರುವ ಬಜೆಟ್ಗೆ ಸಂಬಂಧಿಸಿದಂತೆ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಎಲ್ಲಾ ರಾಜ್ಯಗಳ ಹಣಕಾಸು ಸಚಿವರೊಂದಿಗೆ ಶುಕ್ರವಾರ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಲಿದ್ದಾರೆ. ಸಿಎಸ್ಟಿ ಮತ್ತು ಸರಕು ಹಾಗೂ ಸೇವಾ ತೆರಿಗೆಗಳಿಗೆ ಸಂಬಂಧಿಸಿದ ವಿವಿಧ ವಿಚಾರಗಳ ಕುರಿತು ಸಭೆಯಲ್ಲಿ ಅವರು ಚರ್ಚಿಸಲಿದ್ದಾರೆ.
ಹಣಕಾಸು ಸಚಿವರೊಂದಿಗಿನ ಸಭೆಯ ಬಳಿಕ ಕೈಗಾರಿಕೆ ಮತ್ತು ವ್ಯಾಪಾರ ಒಕ್ಕೂಟಗಳು ಸೇರಿದಂತೆ ವಿವಿಧ ಹಿತಾಸಕ್ತ ಸಂಘಟನೆಗಳ ಜತೆ ಅವರು ವಾಡಿಕೆಯಂತೆ ಬಜೆಟ್ಪೂರ್ವ ಸಮಾಲೋಚನೆ ಪ್ರಾರಂಭಿಸಲಿದ್ದಾರೆ.