ಬೆಂಗಳೂರು: ಡಿಸೆಂಬರ್ 6 ಮತ್ತು 7ರಂದು ಜನ ಸಂಗ್ರಾಮ ಪರಿಷತ್ ಆಶ್ರಯದಲ್ಲಿ ರಾಣೆಬೆನ್ನೂರಿನಲ್ಲಿ ‘ಯುವ ಚೈತನ್ಯ ಮತ್ತು ನಾಯಕತ್ವ ತರಬೇತಿ’ ಶಿಬಿರ ಆಯೋಜಿಸಲಾಗಿದೆ.
ಪ್ರಜಾಪ್ರಭುತ್ವ, ಭಾರತ ಮತ್ತು ಕರ್ನಾಟಕದ ಇತಿಹಾಸ, ಬಂಡಾಯ ಚಳವಳಿಗಳು, ಜಾಗತಿಕ ತಾಪಮಾನ, ಮಾಹಿತಿ ಹಕ್ಕು ಮುಂತಾದ ವಿಷಯಗಳ ಬಗ್ಗೆ ಸಮಾಜ ಪರಿವರ್ತನ ಸಮುದಾಯದ ಮುಖ್ಯಸ್ಥ ಎಸ್.ಆರ್. ಹಿರೇಮಠ ಸೇರಿದಂತೆ ಅನೇಕರು ಮಾಹಿತಿ ನೀಡಲಿದ್ದಾರೆ.
ವಸತಿ ಮತ್ತು ಊಟದ ಸೌಕರ್ಯವಿದ್ದು, ಶಿಬಿರ ಶುಲ್ಕ ₨500. ಕೇವಲ 40 ಜನರಿಗೆ ಅವಕಾಶವಿದೆ. ನೋಂದಣಿ ಮತ್ತು ವಿವರಗಳಿಗೆ ಪ್ರಕಾಶ ಹೂಗಾರ ಅವರನ್ನು (ಮೊಬೈಲ್: 88671 86343) ಸಂಪರ್ಕಿಸಬಹುದು.