<p><strong>ದಾವಣಗೆರೆ:</strong> ಸಂಭವನೀಯ ರೈಲು ಅಪಘಾತವೊಂದು ಬಾಲಕನೊಬ್ಬನ ಸಮಯಪ್ರಜ್ಞೆಯಿಂದಾಗಿ ತಪ್ಪಿದ ಘಟನೆ ನಗರದ ಡಿಸಿಎಂ ಟೌನ್ಶಿಪ್ ಬಳಿ ಭಾನುವಾರ ನಡೆದಿದೆ.<br /> <br /> ಆವರೆಗೆರೆ ಶಾಲೆಯ 4ನೇ ತರಗತಿಯ ವಿದ್ಯಾರ್ಥಿ ಸಿದ್ದೇಶ್ ಈ ಬಾಲಕ. ಟೌನ್ಶಿಪ್ ಬಳಿ ರೈಲು ಹಳಿ ಬಿರುಕು ಬಿಟ್ಟಿರುವುದನ್ನು ಗಮನಿಸಿದ ಈತ ಹರಿಹರ– ಚಿತ್ರದುರ್ಗ ಪ್ಯಾಸೆಂಜರ್ ರೈಲು ಅತ್ತ ಬರುತ್ತಿದ್ದಂತೆ, ಧರಿಸಿದ್ದ ಕೆಂಪು ಟೀಶರ್ಟ್ ಬಿಚ್ಚಿ ಸಿಗ್ನಲ್ ರೀತಿಯಲ್ಲಿ ಎಂಜಿನ್ ಮುಂದೆ ತೋರಿಸಿದ್ದಾನೆ. ಬೆಳಿಗ್ಗೆ 7 ಗಂಟೆ ಸುಮಾರಿಗೆ ರೈಲು ನಿಲುಗಡೆಯಾಗಿದೆ.<br /> <br /> ತಂದೆಯೊಂದಿಗೆ ರೈಲು ಹಳಿ ದಾಟಿ ತೆರಳುತ್ತಿರುವಾಗ ವೆಲ್ಡಿಂಗ್ ಮಾಡಿದ್ದ ಹಳಿ ಬಿರುಕು ಬಿಟ್ಟಿರುವುದನ್ನು 9 ವರ್ಷದ ಸಿದ್ದೇಶ್ ಗಮನಿಸಿದ್ದಾನೆ.<br /> ‘ದೂರದಲ್ಲಿ ರೈಲು ಬರುತ್ತಿದ್ದು, ಹಳಿಯಿಂದ ಶಬ್ದ ಬರುತ್ತಿತ್ತು. ನನ್ನ ಮಗ ಸ್ವಲ್ಪ ದೂರ ಓಡಿ ಹೋಗಿ ರೈಲು ನಿಲ್ಲಿಸಿದ. ಘಟನೆಯಿಂದಾಗಿ ರೈಲು ಸುಮಾರು 20 ನಿಮಿಷ ಸ್ಥಳದಲ್ಲಿಯೇ ನಿಂತಿತ್ತು’ ಎಂದು ಬಾಲಕನ ತಂದೆ ಮಂಜುನಾಥ ‘ಪ್ರಜಾವಾಣಿ’ಗೆ ತಿಳಿಸಿದರು.<br /> <br /> ರೈಲ್ವೆ ಎಂಜಿನಿಯರ್ಗಳು ತಕ್ಷಣ ಸ್ಥಳಕ್ಕೆ ಧಾವಿಸಿ ಹಳಿಯನ್ನು ಸರಿಪಡಿಸಿ ರೈಲು ಚಲಿಸಲು ಅನುಕೂಲ ಮಾಡಿಕೊಟ್ಟರು. ನಂತರ, ಬಿರುಕುಬಿಟ್ಟ ಜಾಗದಲ್ಲಿ ಕಂಬಿ ಬದಲಾಯಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ:</strong> ಸಂಭವನೀಯ ರೈಲು ಅಪಘಾತವೊಂದು ಬಾಲಕನೊಬ್ಬನ ಸಮಯಪ್ರಜ್ಞೆಯಿಂದಾಗಿ ತಪ್ಪಿದ ಘಟನೆ ನಗರದ ಡಿಸಿಎಂ ಟೌನ್ಶಿಪ್ ಬಳಿ ಭಾನುವಾರ ನಡೆದಿದೆ.<br /> <br /> ಆವರೆಗೆರೆ ಶಾಲೆಯ 4ನೇ ತರಗತಿಯ ವಿದ್ಯಾರ್ಥಿ ಸಿದ್ದೇಶ್ ಈ ಬಾಲಕ. ಟೌನ್ಶಿಪ್ ಬಳಿ ರೈಲು ಹಳಿ ಬಿರುಕು ಬಿಟ್ಟಿರುವುದನ್ನು ಗಮನಿಸಿದ ಈತ ಹರಿಹರ– ಚಿತ್ರದುರ್ಗ ಪ್ಯಾಸೆಂಜರ್ ರೈಲು ಅತ್ತ ಬರುತ್ತಿದ್ದಂತೆ, ಧರಿಸಿದ್ದ ಕೆಂಪು ಟೀಶರ್ಟ್ ಬಿಚ್ಚಿ ಸಿಗ್ನಲ್ ರೀತಿಯಲ್ಲಿ ಎಂಜಿನ್ ಮುಂದೆ ತೋರಿಸಿದ್ದಾನೆ. ಬೆಳಿಗ್ಗೆ 7 ಗಂಟೆ ಸುಮಾರಿಗೆ ರೈಲು ನಿಲುಗಡೆಯಾಗಿದೆ.<br /> <br /> ತಂದೆಯೊಂದಿಗೆ ರೈಲು ಹಳಿ ದಾಟಿ ತೆರಳುತ್ತಿರುವಾಗ ವೆಲ್ಡಿಂಗ್ ಮಾಡಿದ್ದ ಹಳಿ ಬಿರುಕು ಬಿಟ್ಟಿರುವುದನ್ನು 9 ವರ್ಷದ ಸಿದ್ದೇಶ್ ಗಮನಿಸಿದ್ದಾನೆ.<br /> ‘ದೂರದಲ್ಲಿ ರೈಲು ಬರುತ್ತಿದ್ದು, ಹಳಿಯಿಂದ ಶಬ್ದ ಬರುತ್ತಿತ್ತು. ನನ್ನ ಮಗ ಸ್ವಲ್ಪ ದೂರ ಓಡಿ ಹೋಗಿ ರೈಲು ನಿಲ್ಲಿಸಿದ. ಘಟನೆಯಿಂದಾಗಿ ರೈಲು ಸುಮಾರು 20 ನಿಮಿಷ ಸ್ಥಳದಲ್ಲಿಯೇ ನಿಂತಿತ್ತು’ ಎಂದು ಬಾಲಕನ ತಂದೆ ಮಂಜುನಾಥ ‘ಪ್ರಜಾವಾಣಿ’ಗೆ ತಿಳಿಸಿದರು.<br /> <br /> ರೈಲ್ವೆ ಎಂಜಿನಿಯರ್ಗಳು ತಕ್ಷಣ ಸ್ಥಳಕ್ಕೆ ಧಾವಿಸಿ ಹಳಿಯನ್ನು ಸರಿಪಡಿಸಿ ರೈಲು ಚಲಿಸಲು ಅನುಕೂಲ ಮಾಡಿಕೊಟ್ಟರು. ನಂತರ, ಬಿರುಕುಬಿಟ್ಟ ಜಾಗದಲ್ಲಿ ಕಂಬಿ ಬದಲಾಯಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>