‘ರಾವಲ್ಪಿಂಡಿಯ ಅಡಿಯಲಾ ಜೈಲಿನಿಂದ ಲಖ್ವಿ ಶುಕ್ರವಾರ ಬೆಳಿಗ್ಗೆ ಬಿಡುಗಡೆಯಾಗಬೇಕಿತ್ತು. ಆದರೆ ಆತನ ವಕೀಲರು ಜಾಮೀನು ಮಂಜೂರಿ ದಾಖಲಾತಿ ಪತ್ರವನ್ನು ಜೈಲು ಅಧಿಕಾರಿಗಳಿಗೆ ಸಲ್ಲಿಸುವುದಕ್ಕೂ ಮೊದಲೇ ಆತನ ಬಂಧನಕ್ಕೆ ಸರ್ಕಾರ ಹೊರಡಿಸಿರುವ ಆದೇಶವನ್ನು ಜೈಲು ಅಧೀಕ್ಷಕರಿಗೆ ತಲುಪಿಸಲಾಯಿತು’ ಎಂದು ಪ್ರಾಸಿಕ್ಯೂಷನ್ ಮುಖ್ಯಸ್ಥ ಚೌಧರಿ ಅಜರ್ ತಿಳಿಸಿದ್ದಾರೆ.
ತಾಲಿಬಾನ್ ಉಗ್ರರು ಪೆಶಾವರದ ಶಾಲೆ ಮೇಲೆ ಆತ್ಮಹತ್ಯಾ ದಾಳಿ ನಡೆಸಿದ ಮರು ದಿವಸವೇ ಲಖ್ವಿಗೆ ಜಾಮೀನು ಸಿಕ್ಕಿದ್ದು, ಪ್ರಧಾನಿ ನವಾಜ್ ಷರೀಫ್ ಅವರ ಸರ್ಕಾರಕ್ಕೆ ತೀವ್ರ ಮುಜುಗರ ಉಂಟು ಮಾಡಿತ್ತು. ಭಯೋತ್ಪಾದನೆ ನಿಗ್ರಹ ಕುರಿತಂತೆ ಪಾಕ್ ನೀತಿಯನ್ನು ಭಾರತ ತೀವ್ರವಾಗಿ ಟೀಕಿಸಿತ್ತು.
ಲಖ್ವಿ ಬಿಡುಗಡೆಯಾದರೆ ಆಗುವ ಮತ್ತಷ್ಟು ಮುಖಭಂಗವನ್ನು ತಪ್ಪಿಸುವ ಸಲುವಾಗಿ ಷರೀಫ್ ಅವರು ಲಖ್ವಿಯನ್ನು ಪುನಃ ಬಂಧಿಸಲು ಈ ಆದೇಶ ಹೊರಡಿಸಿದ್ದಾರೆ ಎನ್ನಲಾಗಿದೆ.