ನವದೆಹಲಿ: ಅಮೇಠಿ ಕ್ಷೇತ್ರದ ಅಭಿವೃದ್ಧಿ ಕುರಿತು ವರುಣ್ ಗಾಂಧಿ ಹೇಳಿಕೆಗೆ ತಾಯಿ ಮೇನಕಾ ಗಾಂಧಿ ಅಸಮಾದಾನ ವ್ಯಕ್ತಪಡಿಸಿದ್ದು, ‘ವರುಣ್ ಈ ಹೇಳಿಕೆ ಸಂದರ್ಭದಲ್ಲಿ ಬುದ್ದಿ ಬಳಸಬೇಕಿತ್ತೇ ಹೊರತು ಹೃದಯವನ್ನಲ್ಲ’ ಎಂದು ಪ್ರತಿಕ್ರಿಯಿಸಿದ್ದಾರೆ.
ವರುಣ್ ಹೃದಯವಂತ ಮತ್ತು ಅಮಾಯಕ. ರಾಹುಲ್ ಕ್ಷೇತ್ರವಾಗಿರುವುದರಿಂದ ಅಭಿವೃದ್ಧಿಯಾಗಿರಬೇಕು ಎಂದು ಭಾವಿಸಿ ಹೇಳಿಕೆ ನೀಡಿದ್ದಾನೆ ಎಂದು ಮೇನಕಾ ಗಾಂಧಿ ಮಗನ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಕಳೆದ 45 ವರ್ಷಗಳಿಂದ ಅಮೇಠಿ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳಾಗಿಲ್ಲ. ಮೂಲಸೌಕರ್ಯಗಳ ಕೊರತೆಯಿಂದ ಈ ಕ್ಷೇತ್ರ ನಲುಗಿ ಹೋಗಿದೆ ಎಂದು ರಾಹುಲ್ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದರು.
ಅಮೇಠಿ ಕ್ಷೇತ್ರದಲ್ಲಿ ರಾಹುಲ್ಉತ್ತಮ ಕೆಲಸಗಳನ್ನು ಮಾಡಿದ್ದಾರೆ ಎಂದು ವರುಣ್ ನಿನ್ನೆ ಮಾಧ್ಯಮಗಳ ಮುಂದೆ ಪ್ರಶಂಸೆ ವ್ಯಕ್ತಪಡಿಸಿದ್ದರು.