ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಗ್ರಹ ರಕ್ಷಣೆ ಅಸಾಧ್ಯವೇ?

Last Updated 16 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಮಂಡ್ಯ ಜಿಲ್ಲೆಯ ಕಿಕ್ಕೇರಿಯ ಪುರಾತನ ಬ್ರಹ್ಮೇಶ್ವರ ದೇಗುಲದಲ್ಲಿದ್ದ ಕೋಟ್ಯಂತರ ರೂಪಾಯಿ ಬೆಲೆ ಬಾಳುವ 6 ಅಪೂರ್ವ ಶಿಲಾಬಾಲಿಕೆಗಳ ವಿಗ್ರಹಗಳು ಕಳುವಾಗಿರು­ವುದು (ಪ್ರ.ವಾ., ಅ. 5) ದುರದೃಷ್ಟಕರ.

ದೇವಾಲಯದ ಒಳ ಪ್ರಾಂಗಣದ ಕಂಬಗಳಿಗೆ ಹೊಂದಿ­ಕೊಂಡಿದ್ದ ಈ ಅಪೂರ್ವ ನಾಟ್ಯಮಾಯೂರಿಯರ ವಿಗ್ರಹ­ಗಳು ಅತ್ಯಂತ ಆಕರ್ಷಕವಾಗಿದ್ದವು. ಬೇಲೂರು, ಹಳೇ­ಬೀಡು ಶಿಲಾ­ಬಾಲಿಕೆ­ಯರಷ್ಟೆ ಮಹತ್ವವುಳ್ಳ, ಸಹಸ್ರಾರು ವರ್ಷಗಳ ಸಂಪತ್ತು ವಿಗ್ರಹ ಕಳ್ಳರ ಪಾಲಾಗಿದೆ. ಉಳಿದ ಐದು ನಾಟ್ಯಮಯೂರಿಯರ ವಿಗ್ರಹಗಳು ಧ್ವಂಸ­ಗೊಂಡಿವೆ.

ರಾಜ್ಯ ಪುರಾತತ್ವ ಇಲಾಖೆಯ ಸುಪರ್ದಿಯಲ್ಲಿರುವ ಈ ದೇವಾಲಯದಲ್ಲಿ ಕಳ್ಳತನ ನಡೆದಿರುವುದು, ಪುರಾತನ ವಿಗ್ರಹ ರಕ್ಷಣೆಗೆ ಇನ್ನೂ ಹೆಚ್ಚಿನ ಕ್ರಮ ಕೈಗೊಳ್ಳ­ಬೇಕಾದ ಅಗತ್ಯವನ್ನು ಸಾರಿ ಹೇಳುತ್ತದೆ. ಈಚೆಗ­ಷ್ಟೇ ನಾನು ಅಲ್ಲಿಗೆ ಭೇಟಿ ಕೊಟ್ಟಿದ್ದೆ. ಅಲ್ಲಿ ಎಲ್ಲೆಡೆ ಜೇಡರ ಬಲೆ ಕಟ್ಟಿ, ದೂಳು ಹಿಡಿದ ವಿಗ್ರಹಗಳು, ದಿನನಿತ್ಯದ ಪೂಜೆಗಿರುವ ಅರ್ಚಕ­ರನ್ನು ಬಿಟ್ಟರೆ, ರಕ್ಷಣೆ­ಗೆಂದು ಭದ್ರತಾ ಸಿಬ್ಬಂದಿಯೂ ಕಾಣಿಸಲಿಲ್ಲ. ಅಮೂಲ್ಯ ಶಿಲಾ­ವಿಗ್ರಹಗಳ ರಕ್ಷಣೆಗೆ ಸಮಗ್ರ ಯೋಜನೆ ರೂಪಿಸ­ಬೇಕು. ಸ್ಥಳೀಯರನ್ನೂ ವಿಶ್ವಾಸಕ್ಕೆ ತಗೆದುಕೊಂಡು, ರಕ್ಷಣೆಗೆ ತೊಡಗಿಕೊಳ್ಳುವಂತೆ ಪ್ರೇರೇಪಿಸ­ಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT