<p>ಮಾಲೂರು: ಪಟ್ಟಣದ ರೈಲ್ವೆ ಸೇತುವೆ ಬಳಿ ಇರುವ ಚಿಂದಿ ಬಟ್ಟೆಯಿಂದ ವೇಸ್ಟ್ ತಯಾರಿಸುವ ಘಟಕದಲ್ಲಿ ಮಂಗಳವಾರ ಬೆಂಕಿ ಅನಾಹುತ ಸಂಭವಿಸಿತು. ಯಂತ್ರಗಳು ಸೇರಿದಂತೆ ಚಿಂದಿ ಬಟ್ಟೆಗಳ ಮೂಟೆಗಳು ಸುಟ್ಟು ಕರಕಲಾದವು.<br /> <br /> ಕೆಲವೇ ಕ್ಷಣದಲ್ಲಿ ಬೆಂಕಿ ಆವಸರಿದ್ದರಿಂದ ಶೆಡ್ನಲ್ಲಿದ್ದ ಯಂತ್ರಗಳು, ಬಟ್ಟೆ– ವೇಸ್ಟ್ ತುಂಬಿದ್ದ ಚೀಲಗಳು ಸುಟ್ಟು ಹೋದವು. ಕಾರ್ಮಿಕರು ಕಾರ್ಖಾನೆಯಿಂದ ಹೊರ ಬಂದು ಸಹಾಯಕ್ಕಾಗಿ ಕೂಗಿಕೊಂಡರು. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.<br /> <br /> ಅಕ್ಕ–ಪಕ್ಕದ ಮನೆಯವರ ನೆರವಿನಿಂದ ಟ್ಯಾಂಕರ್ಗಳ ಮೂಲಕ ೨ ಗಂಟೆ ಕಾಲ ನೀರು ಸಿಂಪಡಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.<br /> ಆಕ್ರೋಶ: ತಾಲ್ಲೂಕಿನ ವಿವಿಧೆಡೆ ಕಾರ್ಖಾನೆಗಳು ಪ್ರಾರಂಭವಾಗಿದೆ. ಆದರೆ ಯಾವುದೇ ಬೆಂಕಿ ಅವಘಡ ನಡೆದರೂ ಅಗ್ನಿಶಾಮಕ ದಳದ ಸಹಾಯ ಸಿಗುವುದಿಲ್ಲ. ಅಗ್ನಿ ಅನಾಹುತ ಸಂಭವಿಸಿದಾಗ ಕೋಲಾರ ಅಥವಾ ಹೊಸಕೋಟೆಯಿಂದ ಅಗ್ನಿಶಾಮಕ ವಾಹನಗಳು ಬರಬೇಕು.<br /> <br /> ಅವು ಬರುವ ಹೊತ್ತಿಗೆ ಬೆಂಕಿ ವ್ಯಾಪಕವಾಗಿ ಆವರಿಸಿರುತ್ತದೆ. ಪಟ್ಟಣದಲ್ಲಿ ಕಳೆದ ೫ ವರ್ಷದಿಂದ ಅಗ್ನಿಶಾಮಕ ಠಾಣೆ ಕಟ್ಟಡ ನಿರ್ಮಾಣ ಕುಂಟುತ್ತಾ ಸಾಗಿದೆ. ಅಧಿಕಾರಿಗಳು ಶೀಘ್ರ ಎಚ್ಚೆತ್ತುಕೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದರು.<br /> <br /> <strong>ವಿದ್ಯುತ್ ಕಂಬಕ್ಕೆ ಆಟೊ ಡಿಕ್ಕಿ</strong><br /> ಮುಳಬಾಗಲು: ತಾಲ್ಲೂಕಿನ ವಿರೂಪಾಕ್ಷಿ ಗ್ರಾಮದಲ್ಲಿ ಸೋಮವಾರ ರಾತ್ರಿ ಆಟೊ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು, ನಿವಾಸಿ ಗಣೇಶ್ ಗಾಯಗೊಂಡರು. ವಿದ್ಯುತ್ ಕಂಬ ಮುರಿದಿದೆ.<br /> <br /> ರಸ್ತೆಯು ಚಿಕ್ಕದಾಗಿದೆ. ರಾತ್ರಿ ವೇಳೆ ಎದುರಿನಿಂದ ಬರುವ ವಾಹನಗಳ ಪ್ರಖರ ಬೆಳಕಿನ ಕಾರಣ ದಾರಿ ಸ್ಪಷ್ಟವಾಗಿ ಗೋಚರಿಸುವುದಿಲ್ಲ. ರಸ್ತೆಗೆ ಹೊಂದಿಕೊಂಡಂತಿರುವ ವಿದ್ಯುತ್ ಕಂಬಗಳು ಸುರಕ್ಷೆಗೆ ಅಪಾಯ ತಂದೊಡ್ಡಿವೆ ಎಂದು ನುಡಿದರು.<br /> <br /> ಆಟೊ ಡಿಕ್ಕಿ ಹೊಡೆದ ರಭಸಕ್ಕೆ ವಿದ್ಯುತ್ ಕಂಬ ಮುರಿದಿದೆ. ಆದರೆ ಕಂಬದ ಕಂಬಿಗಳು ಸಿಮೆಂಟ್ ತುಣುಕುಗಳನ್ನು ಹಿಡಿದುಕೊಂಡಿರುವುದರಿಂದ ಕಂಬ ನೆಲಕ್ಕೆ ಉರುಳಿಲ್ಲ. ರಸ್ತೆಗೆ ಹೊಂದಿಕೊಂಡಂತಿರುವ ಕಂಬಗಳನ್ನು ಸ್ಥಳಾಂತರಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಾಲೂರು: ಪಟ್ಟಣದ ರೈಲ್ವೆ ಸೇತುವೆ ಬಳಿ ಇರುವ ಚಿಂದಿ ಬಟ್ಟೆಯಿಂದ ವೇಸ್ಟ್ ತಯಾರಿಸುವ ಘಟಕದಲ್ಲಿ ಮಂಗಳವಾರ ಬೆಂಕಿ ಅನಾಹುತ ಸಂಭವಿಸಿತು. ಯಂತ್ರಗಳು ಸೇರಿದಂತೆ ಚಿಂದಿ ಬಟ್ಟೆಗಳ ಮೂಟೆಗಳು ಸುಟ್ಟು ಕರಕಲಾದವು.<br /> <br /> ಕೆಲವೇ ಕ್ಷಣದಲ್ಲಿ ಬೆಂಕಿ ಆವಸರಿದ್ದರಿಂದ ಶೆಡ್ನಲ್ಲಿದ್ದ ಯಂತ್ರಗಳು, ಬಟ್ಟೆ– ವೇಸ್ಟ್ ತುಂಬಿದ್ದ ಚೀಲಗಳು ಸುಟ್ಟು ಹೋದವು. ಕಾರ್ಮಿಕರು ಕಾರ್ಖಾನೆಯಿಂದ ಹೊರ ಬಂದು ಸಹಾಯಕ್ಕಾಗಿ ಕೂಗಿಕೊಂಡರು. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.<br /> <br /> ಅಕ್ಕ–ಪಕ್ಕದ ಮನೆಯವರ ನೆರವಿನಿಂದ ಟ್ಯಾಂಕರ್ಗಳ ಮೂಲಕ ೨ ಗಂಟೆ ಕಾಲ ನೀರು ಸಿಂಪಡಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.<br /> ಆಕ್ರೋಶ: ತಾಲ್ಲೂಕಿನ ವಿವಿಧೆಡೆ ಕಾರ್ಖಾನೆಗಳು ಪ್ರಾರಂಭವಾಗಿದೆ. ಆದರೆ ಯಾವುದೇ ಬೆಂಕಿ ಅವಘಡ ನಡೆದರೂ ಅಗ್ನಿಶಾಮಕ ದಳದ ಸಹಾಯ ಸಿಗುವುದಿಲ್ಲ. ಅಗ್ನಿ ಅನಾಹುತ ಸಂಭವಿಸಿದಾಗ ಕೋಲಾರ ಅಥವಾ ಹೊಸಕೋಟೆಯಿಂದ ಅಗ್ನಿಶಾಮಕ ವಾಹನಗಳು ಬರಬೇಕು.<br /> <br /> ಅವು ಬರುವ ಹೊತ್ತಿಗೆ ಬೆಂಕಿ ವ್ಯಾಪಕವಾಗಿ ಆವರಿಸಿರುತ್ತದೆ. ಪಟ್ಟಣದಲ್ಲಿ ಕಳೆದ ೫ ವರ್ಷದಿಂದ ಅಗ್ನಿಶಾಮಕ ಠಾಣೆ ಕಟ್ಟಡ ನಿರ್ಮಾಣ ಕುಂಟುತ್ತಾ ಸಾಗಿದೆ. ಅಧಿಕಾರಿಗಳು ಶೀಘ್ರ ಎಚ್ಚೆತ್ತುಕೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದರು.<br /> <br /> <strong>ವಿದ್ಯುತ್ ಕಂಬಕ್ಕೆ ಆಟೊ ಡಿಕ್ಕಿ</strong><br /> ಮುಳಬಾಗಲು: ತಾಲ್ಲೂಕಿನ ವಿರೂಪಾಕ್ಷಿ ಗ್ರಾಮದಲ್ಲಿ ಸೋಮವಾರ ರಾತ್ರಿ ಆಟೊ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು, ನಿವಾಸಿ ಗಣೇಶ್ ಗಾಯಗೊಂಡರು. ವಿದ್ಯುತ್ ಕಂಬ ಮುರಿದಿದೆ.<br /> <br /> ರಸ್ತೆಯು ಚಿಕ್ಕದಾಗಿದೆ. ರಾತ್ರಿ ವೇಳೆ ಎದುರಿನಿಂದ ಬರುವ ವಾಹನಗಳ ಪ್ರಖರ ಬೆಳಕಿನ ಕಾರಣ ದಾರಿ ಸ್ಪಷ್ಟವಾಗಿ ಗೋಚರಿಸುವುದಿಲ್ಲ. ರಸ್ತೆಗೆ ಹೊಂದಿಕೊಂಡಂತಿರುವ ವಿದ್ಯುತ್ ಕಂಬಗಳು ಸುರಕ್ಷೆಗೆ ಅಪಾಯ ತಂದೊಡ್ಡಿವೆ ಎಂದು ನುಡಿದರು.<br /> <br /> ಆಟೊ ಡಿಕ್ಕಿ ಹೊಡೆದ ರಭಸಕ್ಕೆ ವಿದ್ಯುತ್ ಕಂಬ ಮುರಿದಿದೆ. ಆದರೆ ಕಂಬದ ಕಂಬಿಗಳು ಸಿಮೆಂಟ್ ತುಣುಕುಗಳನ್ನು ಹಿಡಿದುಕೊಂಡಿರುವುದರಿಂದ ಕಂಬ ನೆಲಕ್ಕೆ ಉರುಳಿಲ್ಲ. ರಸ್ತೆಗೆ ಹೊಂದಿಕೊಂಡಂತಿರುವ ಕಂಬಗಳನ್ನು ಸ್ಥಳಾಂತರಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>