ಆಡಳಿತ ತರಬೇತಿ ಸಂಸ್ಥೆ ಮಹಾನಿರ್ದೇಶಕಿ ವಿ. ರಶ್ಮಿ ಅವರ ಮೇಲಿನ ದಾಳಿ ಖಂಡನೀಯ. (ಪ್ರ.ವಾ.ಅ.17).
ಆಡಳಿತಾತ್ಮಕ ಸಮಸ್ಯೆ ಬಂದಾಗ ಕ್ರಮ ಕೈಗೊಳ್ಳುವುದು ಯಾವುದೇ ಉನ್ನತ ಅಧಿಕಾರಿಯ ಕರ್ತವ್ಯ. ಗೆಜೆಟೆಡ್ ಮ್ಯಾನೇಜರ್ ವೆಂಕಟೇಶ್ ಆತ್ಮಹತ್ಯೆ ಮಾಡಿಕೊಂಡಿದ್ದೇ ನಿಜ ಆಗಿದ್ದಲ್ಲಿ ವಿವೇಚನೆಯಿಂದ ವರ್ತಿಸಿ ಸಮಸ್ಯೆ ಪರಿಹರಿಸಿಕೊಳ್ಳಬಹುದಿತ್ತು.
ತಪ್ಪಿತಸ್ಥರಾಗಿರದಿದ್ದರೆ ಯಾವ ಕಿರುಕುಳಕ್ಕೂ ಅಂಜದೆ ಕಾನೂನು ಹೋರಾಟ ಮಾಡಬಹುದಿತ್ತು. ಆದರೆ ಪ್ರತಿಭಟನೆ ಪ್ರದರ್ಶಿಸುವ ಭರದಲ್ಲಿ ಕೆಲವರು ರಶ್ಮಿ ಅವರ ಮೇಲೆ ಕೈಮಾಡಿದ್ದು ದುರದೃಷ್ಟಕರ. ಮಹಿಳೆಯರು ಎಷ್ಟೇ ಉನ್ನತ ಹುದ್ದೆಯಲ್ಲಿರಲಿ ಅವರು ಕೆಲಸ ಮಾಡುವ ಸ್ಥಳ ಸುರಕ್ಷಿತವಲ್ಲ ಎಂಬುದು ಇದರಿಂದ ಸಾಬೀತಾಗಿದೆ.