ಬೆಂಗಳೂರು: ಕರ್ನಾಟಕ ಶಿಲ್ಪಕಲಾ ಅಕಾಡೆಮಿ ನೀಡುವ 2012 ಮತ್ತು 2013ನೇ ಸಾಲಿನ ಗೌರವ ಪ್ರಶಸ್ತಿಗಳನ್ನು ಶನಿವಾರ ಘೋಷಿಸಲಾಗಿದೆ.
2012ನೇ ಸಾಲು: ಬಸಪ್ಪ ಕಾಳಪ್ಪ ಕಂಚಗಾರ, ಸುರಪುರ (ಸಗರನಾಡಿನ ಜಾನಪದ ಶೈಲಿ), ಬಿ. ಜಯಮ್ಮ, ಮೈಸೂರು (ಕಾಷ್ಠಶಿಲ್ಪ), ನಾಗಪ್ಪ ಪ್ರಧಾನಿ, ರಾಯಚೂರು (ಸಮಕಾಲೀನ ಶಿಲ್ಪ), ವೈ. ಚಂದ್ರಶೇಖರ ಶಿಲ್ಪಿ, ಗುಲ್ಬರ್ಗ (ಕಾಷ್ಠಶಿಲ್ಪ), ಭೀಮಾಚಾರ್ಯ, ಶಿವಾರಪಟ್ಟಣ, ಕೋಲಾರ (ಶಿಲಾ ಶಿಲ್ಪ).
2013ನೇ ಸಾಲು: ಏಕಪ್ಪ ಆರ್. ಚಿತ್ರಗಾರ, ಕಿನ್ನಾಳ, ಕೊಪ್ಪಳ ಜಿಲ್ಲೆ (ಕಿನ್ನಾಳ ಶೈಲಿ ಶಿಲ್ಪ), ಶ್ಯಾಮಲಾ ನಂದೀಶ್ ಮತ್ತು ತೇಜೇಂದ್ರ ಸಿಂಗ್ ಬೋನಿ, ಬೆಂಗಳೂರು (ಸಮಕಾಲೀನ ಶಿಲ್ಪ), ಗಂಗಾಧರ ಆಚಾರ್ಯ, ಕೆಳಗಿನ ಇಡಗುಂಜಿ, ಉತ್ತರ ಕನ್ನಡ (ರಥ ಶಿಲ್ಪ), ಟಿ. ಶಿವಶಂಕರ್, ಚಿತ್ರದುರ್ಗ (ಗೋಪುರ ಶಿಲ್ಪ).
ಪುರಸ್ಕೃತರಿಗೆ ತಲಾ ₨ 10 ಸಾವಿರ ನಗದು, ಸ್ಮರಣಿಕೆ ನೀಡಲಾಗುವುದು. ಪ್ರಶಸ್ತಿ ಪ್ರದಾನದ ದಿನ ಮತ್ತು ಸ್ಥಳ ನಿಗದಿಯಾಗಬೇಕಿದೆ ಎಂದು ಅಕಾಡೆಮಿಯ ರಿಜಿಸ್ಟ್ರಾರ್ ಎಚ್.ವಿ. ಇಂದ್ರಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.