‘ಶೀನಾಳ ತಾಯಿ ಇಂದ್ರಾಣಿ ಮುಖರ್ಜಿಯನ್ನು ನಾನು ಮದುವೆ ಆಗಿರಲಿಲ್ಲ. ಆದರೆ, ನಾವಿಬ್ಬರು 'ಲಿವಿಂಗ್ ಟುಗೆದರ್'ನಲ್ಲಿ ಜತೆಗಿದ್ದೆವು. ಶೀನಾ ಮತ್ತು ಆಕೆಯ ಸಹೋದರ ಮಿಖಾಯಿಲ್ ಬೋರಾ ಇಬ್ಬರೂ ನನ್ನ ಮಕ್ಕಳು. 1989ರಲ್ಲಿ ಇಂದ್ರಾಣಿ ನನ್ನನ್ನು ತೊರೆದು ಹೋದಳು. ಆ ನಂತರ, ಇದುವರೆಗೆ ನಾನು ಅವಳನ್ನು ಭೇಟಿಯಾಗಿಲ್ಲ. ಶೀನಾ ಕೊಲೆ ಆಗಿರುವ ವಿಚಾರ, ಪತ್ರಿಕೆಗಳ ಮುಖಾಂತರ ತಿಳಿಯಿತು’ ಎಂದು ಸಿದ್ಧಾರ್ಥ ಹೇಳಿದ್ದಾರೆ.
ಪೊಲೀಸ್ ತನಿಖೆಗೆ ಸಹಕರಿಸುವುದಾಗಿ ಹೇಳಿದ ಅವರು, ಒಂದು ವೇಳೆ, ಇಂದ್ರಾಣಿಯೇ ಶೀನಾಳನ್ನು ಕೊಲೆ ಮಾಡಿದ್ದರೆ, ಅವಳನ್ನು ಗಲ್ಲಿಗೇರಿಸಬೇಕು. ಶೀನಾಳ ತಂದೆ ನಾನೇ ಎನ್ನುವುದನ್ನು ಖಾತ್ರಿ ಪಡಿಸಿಕೊಳ್ಳಲು ‘ಡಿಎನ್ಎ’ ಪರೀಕ್ಷೆಗೂ ಸಿದ್ಧ ಎಂದು ಸಿದ್ಧಾರ್ಥ್ ಹೇಳಿದ್ದಾರೆ.
1986ರಲ್ಲಿ ಕಾಲೇಜು ದಿನಗಳಲ್ಲಿ ನಾನು ಇಂದ್ರಾಣಿಯನ್ನು ಭೇಟಿಯಾದೆ. 1989ರ ತನಕ ಜತೆಗಿದ್ದೆವು. ಆಗ ನನಗೆ ಯಾವುದೇ ಉದ್ಯೋಗ ಇರಲಿಲ್ಲ. ಹಾಗಾಗಿ ಇಂದ್ರಾಣಿ ನನ್ನನ್ನು ತೊರೆದು ಹೋದಳು ಎಂದು ದಾಸ್ ಹೇಳಿದ್ದಾರೆ.