ನವದೆಹಲಿ(ಪಿಟಿಐ): ಪ್ರವಾಹದಿಂದ ಭಾರಿ ಜೀವಹಾನಿ ಹಾಗೂ ಆಸ್ತಿ ನಷ್ಟ ಹೊಂದಿದ್ದರೂ, ವಿಧಾನಸಭೆ ಚುನಾವಣೆ ನಡೆಸಬೇಕೆಂಬ ಬೇಡಿಕೆಯಿಂದ ರಾಜ್ಯದ ಪರಿಸ್ಥಿತಿ ಅವಲೋಕಿಸಲು ಆಯೋಗದ ತಂಡ 18ರಂದು ಶನಿವಾರ ಶ್ರೀನಗರಕ್ಕೆ ಭೇಟಿ ನೀಡಲಿದೆ.
ಮುಖ್ಯ ಚುನಾವಣಾ ಆಯುಕ್ತ ವಿ.ಎಸ್ ಸಂಪತ್ ಮತ್ತು ಚುನಾವಣಾ ಆಯುಕ್ತರಾದ ಎಚ್.ಎಸ್.ಬ್ರಹ್ಮ ಹಾಗೂ ನಸೀಂ ಜೈದಿ ಅವರನ್ನು ಒಳಗೊಂಡ ತಂಡ ರಾಜ್ಯಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಲಿದೆ.