ಅಂದು ಸಂಜೆ 4ಕ್ಕೆ ಮೈಸೂರು ವಿವಿಯ ಕ್ರಾಫರ್ಡ್ ಹಾಲ್ನಲ್ಲಿ ನಡೆಯುವ ಸಮಾರಂಭದಲ್ಲಿ ಕರ್ನಾಟಕ ಸಂಗೀತ ವೈಣಿಕ ಪ್ರೊ.ರಾ. ವಿಶ್ವೇಶ್ವರನ್, ಹಿಂದುಸ್ತಾನಿ ಗಾಯಕ ಪಂ.ಇಂದೂಧರ ನಿರೋಡಿ ಹಾಗೂ ಭರತನಾಟ್ಯ ಕಲಾವಿದ ನಾಟ್ಯಾಚಾರ್ಯ ಸಿ. ರಾಧಾಕೃಷ್ಣ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತದೆ.
ಅಲ್ಲದೆ, ಮೂವರು ಪದವೀಧರರಿಗೆ ಹಾಗೂ 32 ಸ್ನಾತಕೋತ್ತರ ಪದವೀಧರರಿಗೆ ಪದವಿ ಪ್ರದಾನ ಮಾಡಲಾಗುತ್ತದೆ. ಹಿರಿಯ ಭರತನಾಟ್ಯ ಹಾಗೂ ಚಲನಚಿತ್ರ ಕಲಾವಿದೆ ಡಾ.ವೈಜಯಂತಿಮಾಲಾ ಬಾಲಿ ಅವರು ಘಟಿಕೋತ್ಸವ ಭಾಷಣ ಮಾಡುವರು. ಉನ್ನತ ಶಿಕ್ಷಣ ಸಚಿವ ಟಿ.ಬಿ. ಜಯಚಂದ್ರ ಹಾಜರಿರುವರು. ರಾಜ್ಯಪಾಲ ವಜುಭಾಯಿ ವಾಲಾ ಅಧ್ಯಕ್ಷತೆ ವಹಿಸುವರು.