ನವದೆಹಲಿ (ಪಿಟಿಐ): ಅವಿಭಜಿತ ಆಂಧ್ರ ಪ್ರದೇಶದ ಪೋಲವರಂ ನೀರಾವರಿ ಯೋಜನೆ ಜಾರಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹೊರಡಿಸಿರುವ ಸುಗ್ರೀವಾಜ್ಞೆಯನ್ನು ವಿರೋಧಿಸಿ ತೆಲಂಗಾಣ ರಾಷ್ಟ್ರೀಯ ಸಮಿತಿ (ಟಿಆರ್ಎಸ್) ಸಂಸದರು ಸೋಮವಾರ ಸಂಸತ್ತಿನಲ್ಲಿ ಪ್ರತಿಭಟನೆ ನಡೆಸಿದರು.
ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ಸಂತೋಷ್ ಗಂಗ್ವಾರ್ ಆಂಧ್ರ ಪ್ರದೇಶ ಪುನರ್ವಿಂಗಡಣಾ ತಿದ್ದುಪಡಿ ಸುಗ್ರೀವಾಜ್ಞೆ (2014) ಮಂಡಿಸಿದರು.
ಇದನ್ನು ವಿರೋಧಿಸಿ ಬಿಜೆಡಿ ಹಾಗೂ ಟಿಆರ್ಎಸ್ ಸಂಸದರು ಘೋಷಣೆ ಕೂಗುತ್ತ ಸಭಾಧ್ಯಕ್ಷರ ಪೀಠದತ್ತ ನುಗ್ಗಿದರು.
ಪ್ರತಿಭಟನಾನಿರತ ಸಂಸದರು ಸ್ಪೀಕರ್ ಸುಮಿತ್ರಾ ಮಹಾಜನ್ ಅವರ ಮನವಿಗೆ ಕಿವಿಗೊಡದ ಹಿನ್ನೆಲೆಯಲ್ಲಿ ಕಲಾಪವನ್ನು ಮಂಗಳವಾರಕ್ಕೆ ಮುಂದೂಡಲಾಯಿತು. 16ನೇ ಲೋಕಸಭೆಯ ಕಲಾಪ ಆರಂಭವಾದ ಮೇಲೆ ನಡೆದ ಮೊದಲನೇ ಪ್ರತಿಭಟನೆ ಇದಾಗಿದೆ.