ನವದೆಹಲಿ (ಪಿಟಿಐ): ಹೂಡಿಕೆದಾರರ ₨ 20 ಸಾವಿರ ಕೋಟಿ ಪಾವತಿ ಮಾಡದ ಪ್ರಕರಣದಲ್ಲಿ ಸಹಾರಾ ಸಮೂಹದ ಮುಖ್ಯಸ್ಥ ಸುಬ್ರತೊ ರಾಯ್ ಅವರನ್ನು ಜೈಲಿಗೆ ಕಳುಹಿಸಿರುವ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ಮೇಲಿನ ತೀರ್ಪನ್ನು ಸುಪ್ರೀಂ ಕೋರ್ಟ್ ಕಾಯ್ದಿರಿಸಿದೆ.
ಹೂಡಿಕೆದಾರರಿಗೆ ₨ 10 ಸಾವಿರ ಕೋಟಿ ಪಾವತಿಸುವ ಸಹಾರಾ ಪ್ರಸ್ತಾಪವನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್ ಪೀಠ ಒಪ್ಪಿಗೆ ಸೂಚಿಸಿದೆ.