ಬುಧವಾರ ಲೋಕಸಭೆಯಲ್ಲಿ ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಕೋಮು ಗಲಭೆ ಮತ್ತು ಯುಪಿಎಸ್ಸಿ ಪರೀಕ್ಷೆ ಗೊಂದಲ ಕುರಿತು ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ವಿರೋಧ ಪಕ್ಷಗಳು ಗದ್ದಲ ಎಬ್ಬಿಸಿದವು. ಈ ವೇಳೆ ಮಾತನಾಡಲು ಎದ್ದುನಿಂತ ರಾಹುಲ್ ಅವರಿಗೆ ಅವಕಾಶ ನಿರಾಕರಿಸಲಾಯಿತು.
ಈ ಕುರಿತು ಲೋಕಸಭೆ ಹೊರಗೆ ವರದಿಗಾರರಿಗೆ ಪ್ರತಿಕ್ರಿಯಿಸಿದ ರಾಹುಲ್, ಲೋಕಸಭೆಯಲ್ಲಿ ನಮಗೆ (ವಿರೋಧ ಪಕ್ಷಗಳಿಗೆ ) ಮಾತನಾಡಲು ಅವಕಾಶ ನೀಡುತ್ತಿಲ್ಲ. ಎನ್ಡಿಎ ಸರ್ಕಾರ ಬಂದ ಮೇಲೆ ಸದನದ ಒಳಗೆ ಗಲಭೆ ಹೆಚ್ಚಳವಾಗಿದೆ. ಸ್ಪೀಕರ್ ಕೂಡ ಪಕ್ಷಪಾತಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಸದನದಲ್ಲಿ ಮೊದಲ ಬಾರಿಗೆ ನೀವು ಗಟ್ಟಿಯಾಗಿ ಧ್ವನಿ ಎತ್ತಿದ್ದೀರಿ ಎಂಬ ವರದಿಗಾರರೊಬ್ಬರ ಪ್ರಶ್ನೆಗೆ, ನಾನು ಹಲವು ಬಾರಿ ಸದನದೊಳಗೆ ನನ್ನ ಧ್ವನಿ ಎತ್ತಿದ್ದೇನೆ’ ಎಂದು ರಾಹುಲ್ ಮಾರುತ್ತರ ನೀಡಿದರು.