ಗುವಾಹಟಿ/ಕೋಲ್ಕತ್ತ (ಪಿಟಿಐ): ಬರ್ದ್ವಾನ್ ಸ್ಫೋಟದ ಪ್ರಮುಖ ಆರೋಪಿ ಹಾಗೂ ಜಮಾತ್ ಉಲ್ ಮುಜಾಹಿದ್ದೀನ್ ಬಾಂಗ್ಲಾದೇಶ (ಜೆಎಂಬಿ) ಉಗ್ರ ಸಂಘಟನೆಯ ತರಬೇತುದಾರ ಸಹಾನೂರ್ ಆಲಂ ನ್ಯಾಯಾಂಗ ಅವಧಿಯನ್ನು ಮತ್ತೆ 14 ದಿನಕ್ಕೆ ವಿಸ್ತರಿಸಲಾಗಿದೆ.
ಇತರ ಐವರನ್ನು ನ್ಯಾಯಂಗ ವಶಕ್ಕೆ ಒಪ್ಪಿಸಲಾಗಿದೆ. ಉಳಿದ ಆರೋಪಿಗಳಿಬ್ಬರನ್ನು ಮೂರು ದಿನಗಳ ಅವಧಿಗೆ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್ಐಎ) ವಶಕ್ಕೆ ಒಪ್ಪಿಸಲಾಗಿದೆ.