ಬೆಂಗಳೂರು: ಡಾ. ರಾಜ್ಕುಮಾರ್ ಅವರ ಜನ್ಮ ದಿನವಾದ ಗುರುವಾರ ಅಭಿಮಾನಿಗಳು ಅವರ ಗೀತೆಗಳ ಗಾಯನ, ಅನ್ನ ಸಂತರ್ಪಣೆ ನಡೆಸುವಂತಹ ಕಾರ್ಯಗಳಲ್ಲಿ ಭಾಗಿಯಾದರೆ, ಅಗ್ನಿ ಇಂಡಿಯನ್ಸ್ ಎಂಬ ಸ್ವಯಂ ಸೇವಾಸಂಸ್ಥೆ ಕಾರ್ಯಕರ್ತರು ಸದಾಶಿವನಗರದಲ್ಲಿ ಇರುವ ಡಾ.ರಾಜ್ ಮನೆ ಸುತ್ತ ಸ್ವಚ್ಛತಾ ಕಾರ್ಯ ನಡೆಸುವ ಮೂಲಕ ವಿಶಿಷ್ಟವಾಗಿ ಜನ್ಮ ದಿನ ಆಚರಿಸಿದರು.
ಸ್ವಚ್ಛತಾ ಕಾರ್ಯ ನಡೆದಾಗ ಅಲ್ಲಿಗೆ ಬಂದ ಪುನೀತ್ ರಾಜ್ಕುಮಾರ್ ಸ್ವಯಂಸೇವಕರಿಗೆ ಧನ್ಯವಾದ ಹೇಳಿದರು. ‘ಈ ಪ್ರದೇಶದಲ್ಲಿ ಹಲವು ದಿನಗಳಿಂದ ಸ್ವಚ್ಛತಾ ಸಮಸ್ಯೆ ಇತ್ತು. ಇದರಿಂದ ನೆರೆಹೊರೆಯವರಿಗೂ ತೊಂದರೆಯಾಗಿತ್ತು. ಈಗ ವಾತಾವರಣ ಬದಲಾಗಿದೆ’ ಎಂದು ತಿಳಿಸಿದರು. ಸ್ವಯಂಸೇವಕರ ಜತೆ ಅವರು ಫೋಟೊ ತೆಗೆಸಿಕೊಂಡರು.
ಹಲವು ದಿನಗಳಿಂದ ಬಿದ್ದಿದ್ದ ಕಸ ಎತ್ತಿದರಲ್ಲದೆ, ಕಾಂಪೌಂಡ್ಗೆ ಬಣ್ಣ ಬಳಿದು, ಅಂದವನ್ನು ಹೆಚ್ಚಿಸಿದರು.