ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಚ್ಛತೆ ಮೂಲಕ ರಾಜ್‌ ಸ್ಮರಣೆ

Last Updated 24 ಏಪ್ರಿಲ್ 2014, 20:06 IST
ಅಕ್ಷರ ಗಾತ್ರ

ಬೆಂಗಳೂರು: ಡಾ. ರಾಜ್‌ಕುಮಾರ್‌ ಅವರ ಜನ್ಮ ದಿನವಾದ ಗುರುವಾರ ಅಭಿಮಾನಿ­ಗಳು ಅವರ ಗೀತೆಗಳ ಗಾಯನ, ಅನ್ನ ಸಂತರ್ಪಣೆ ನಡೆಸುವಂತಹ ಕಾರ್ಯಗಳಲ್ಲಿ ಭಾಗಿಯಾದರೆ, ಅಗ್ನಿ ಇಂಡಿಯನ್ಸ್‌ ಎಂಬ ಸ್ವಯಂ ಸೇವಾಸಂಸ್ಥೆ ಕಾರ್ಯಕರ್ತರು ಸದಾಶಿವನಗರದಲ್ಲಿ ಇರುವ ಡಾ.ರಾಜ್‌ ಮನೆ ಸುತ್ತ ಸ್ವಚ್ಛತಾ ಕಾರ್ಯ ನಡೆಸುವ ಮೂಲಕ ವಿಶಿಷ್ಟವಾಗಿ ಜನ್ಮ ದಿನ ಆಚರಿಸಿದರು.

ಸ್ವಚ್ಛತಾ ಕಾರ್ಯ ನಡೆದಾಗ ಅಲ್ಲಿಗೆ ಬಂದ ಪುನೀತ್‌ ರಾಜ್‌ಕುಮಾರ್‌ ಸ್ವಯಂ­ಸೇವಕರಿಗೆ ಧನ್ಯವಾದ ಹೇಳಿದರು. ‘ಈ ಪ್ರದೇಶದಲ್ಲಿ ಹಲವು ದಿನಗಳಿಂದ ಸ್ವಚ್ಛತಾ ಸಮಸ್ಯೆ ಇತ್ತು. ಇದರಿಂದ ನೆರೆಹೊರೆ­ಯವರಿಗೂ ತೊಂದರೆಯಾಗಿತ್ತು. ಈಗ ವಾತಾವರಣ ಬದಲಾಗಿದೆ’ ಎಂದು ತಿಳಿಸಿದರು. ಸ್ವಯಂಸೇವಕರ ಜತೆ ಅವರು ಫೋಟೊ ತೆಗೆಸಿಕೊಂಡರು.

ಹಲವು ದಿನಗಳಿಂದ ಬಿದ್ದಿದ್ದ ಕಸ ಎತ್ತಿದರಲ್ಲದೆ, ಕಾಂಪೌಂಡ್‌ಗೆ ಬಣ್ಣ ಬಳಿದು, ಅಂದವನ್ನು ಹೆಚ್ಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT