<p><strong>ಜೂರಿಚ್/ ನವದೆಹಲಿ (ಪಿಟಿಐ): </strong>ಸ್ವಿಟ್ಜರ್ಲೆಂಡ್ನ ಬ್ಯಾಂಕುಗಳಲ್ಲಿ ಹಣ ಇರಿಸಿರುವ ಭಾರತೀಯರ ಪಟ್ಟಿಯನ್ನು ಅಲ್ಲಿನ ಸರ್ಕಾರ ಸಿದ್ಧಪಡಿಸಿದ್ದು, ಈ ವಿವರಗಳನ್ನು ಭಾರತ ಸರ್ಕಾರದೊಂದಿಗೆ ಹಂಚಿಕೊಳ್ಳುವ ಪ್ರಕ್ರಿಯೆಗೆ ಚಾಲನೆ ಕೊಟ್ಟಿದೆ.<br /> <br /> ಹೀಗಾಗಿ ವಿದೇಶಿ ಬ್ಯಾಂಕ್ಗಳಲ್ಲಿ ಭಾರತೀಯರು ಅಕ್ರಮವಾಗಿ ಇಟ್ಟ ಕಪ್ಪುಹಣ ವಾಪಸ್ ತರಲು ಭಾರತ ನಡೆಸಿದ್ದ ಅವಿರತ ಹೋರಾಟ ಕೊನೆಗೂ ಫಲಪ್ರದವಾಗುವ ಲಕ್ಷಣ ಕಂಡುಬಂದಿದೆ.<br /> <br /> ಇದರ ನಡುವೆಯೇ, ಕಪ್ಪುಹಣ ಇರಿಸಿರುವವರ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಕೇಂದ್ರ ಸರ್ಕಾರದ ವಿಶೇಷ ತನಿಖಾ ತಂಡ (ಎಸ್ಐಟಿ) ತಿಳಿಸಿದೆ.<br /> <br /> ಸಕ್ರಮ ಖಾತೆದಾರರೂ ಇದ್ದಾರೆ: ‘ಸ್ವಿಟ್ಜರ್ಲೆಂಡ್ ಸಿದ್ಧಪಡಿಸಿರುವ ಪಟ್ಟಿಬರೀ ಕಪ್ಪುಹಣ ಹೊಂದಿದವರ ಪಟ್ಟಿಯಲ್ಲ. ಇದರಲ್ಲಿ ಕಾನೂನುಬದ್ಧವಾಗಿ ಹಣ ಇಟ್ಟವರ ಹೆಸರೂ ಸೇರಿದೆ. ಹೀಗಾಗಿ ಪಟ್ಟಿಯನ್ನು ಪರಿಶೀಲಿಸಿ ನಂತರ ತಪ್ಪಿತಸ್ಥರನ್ನು ಹುಡುಕಬೇಕಾಗುತ್ತದೆ’ ಎಂದು ಎಸ್ಐಟಿ ಮುಖ್ಯಸ್ಥ ನಿವೃತ್ತ ನ್ಯಾಯಮೂರ್ತಿ ಎಂ.ಬಿ.ಷಾ ಸ್ಪಷ್ಟಪಡಿಸಿದ್ದಾರೆ.<br /> <br /> ಕಾನೂನುಬದ್ಧವಾಗಿ ಹಣ ಇಟ್ಟವರ ಮೇಲೆ ಯಾವ ಕ್ರಮವನ್ನೂ ತೆಗೆದುಕೊಳ್ಳಲಾಗದು. ಅಕ್ರಮವಾಗಿ ಹಣ ಇರಿಸಿರುವವರ ವಿರುದ್ಧ ಮಾತ್ರ ಕ್ರಮ ತೆಗೆದುಕೊಳ್ಳಬಹುದು. ಯಾವ ರೀತಿಯಲ್ಲಿ ಹಣವನ್ನು ಠೇವಣಿ ಇರಿಸಲಾಗಿದೆ ಎಂಬುದನ್ನು ಅದು ಅವಲಂಬಿಸುತ್ತದೆ ಎಂದೂ ಅವರು ವಿವರಿಸಿದ್ದಾರೆ.<br /> <br /> <strong>ನೈಜ ವಾರಸುದಾರರು</strong>: ಸ್ವಿಟ್ಜರ್ಲೆಂಡ್ನ ವಿವಿಧ ಬ್ಯಾಂಕುಗಳಲ್ಲಿ ಇರಿಸಿರುವ ಹಣದ ನಿಜವಾದ ಒಡೆಯರು ಯಾರೆಂಬುದನ್ನು ಪತ್ತೆಹಚ್ಚುವ ಕಾರ್ಯ ನಡೆಯುತ್ತಿದ್ದು, ಅದರ ಭಾಗವಾಗಿ ಭಾರತೀಯ ಖಾತೆದಾರ ವ್ಯಕ್ತಿಗಳು ಹಾಗೂ ಸಂಸ್ಥೆಗಳ ಪಟ್ಟಿಯನ್ನು ಅಧಿಕಾರಿಗಳು ಸಿದ್ಧಪಡಿಸಿದ್ದಾರೆ ಎಂದು ಸ್ವಿಸ್ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.<br /> <br /> ವಿದೇಶಗಳಲ್ಲಿರುವ ಟ್ರಸ್ಟ್ಗಳು, ಸ್ವಿಸ್ನಲ್ಲಿ ನೆಪ ಮಾತ್ರಕ್ಕೆ ನೋಂದಣಿ ಮಾಡಿಸಲಾಗಿರುವ ಕಂಪೆನಿಗಳು ಹಾಗೂ ಇನ್ನಿತರ ಕಾನೂನುಬದ್ಧ ಸಂಸ್ಥೆಗಳ ಮೂಲಕ ಈ ಹಣವನ್ನು ಇರಿಸಲಾಗಿದೆ ಎಂದು ಅಧಿಕಾರಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.<br /> <br /> ಉಭಯ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಮಾಹಿತಿ ವಿನಿಮಯ ಒಪ್ಪಂದದ ಪ್ರಕಾರ ಇಂತಹ ಮಾಹಿತಿಗಳ ಗೋಪ್ಯತೆ ಕಾಪಾಡಬೇಕಾಗುತ್ತದೆ. ಹೀಗಾಗಿ, ತೆರಿಗೆ ರಹಿತ ಹಣ ಇರಿಸಿರುವವರ ಖಾತೆದಾರರ ಹೆಸರು, ಸಂಸ್ಥೆಗಳ ಹೆಸರು ಹಾಗೂ ಇರಿಸಿರುವ ಹಣದ ಮೊತ್ತ ಎಷ್ಟೆಂಬುದನ್ನು ಬಹಿರಂಗಗೊಳಿಸಲಾಗದು ಎಂದೂ ಸ್ಪಷ್ಟಪಡಿಸಿದ್ದಾರೆ.<br /> <br /> ಭಾರತದಲ್ಲಿ ಅಧಿಕಾರಕ್ಕೆ ಬಂದಿರುವ ಹೊಸ ಸರ್ಕಾರಕ್ಕೆ ಸಹಕರಿಸಲು ಸ್ವಿಸ್ ಇಲಾಖೆಗಳು ಉತ್ಸಾಹದಿಂದಿವೆ. ಭಾರತದಲ್ಲಿ ಕಪ್ಪುಹಣ ತನಿಖೆಗಾಗಿ ರಚಿಸಲಾಗಿರುವ ವಿಶೇಷ ತನಿಖಾ ತಂಡಕ್ಕೆ (ಎಸ್ಐಟಿ) ಎಲ್ಲಾ ರೀತಿಯ ಸಹಕಾರವನ್ನು ಈ ಇಲಾಖೆಗಳು ನೀಡಲಿವೆ ಎಂದಿದ್ದಾರೆ. ಸ್ವಿಸ್ ರಾಷ್ಟ್ರೀಯ ಬ್ಯಾಂಕು ಇತ್ತೀಚೆಗಷ್ಟೇ ಬಿಡುಗಡೆ ಮಾಡಿರುವ ಅಂಕಿ ಅಂಶದ ಪ್ರಕಾರ, ಅಲ್ಲಿನ 283 ಬ್ಯಾಂಕುಗಳಲ್ಲಿ ಎಲ್ಲಾ ವಿದೇಶಗಳ ಖಾತೆದಾರರು ಒಟ್ಟು ಇರಿಸಿರುವ ಹಣದ ಮೊತ್ತ 1.6 ಲಕ್ಷ ಕೋಟಿ ಡಾಲರ್ (ಸುಮಾರು ₨ 97 ಲಕ್ಷ ಕೋಟಿ). ಹೀಗಾಗಿ ಭಾರತೀಯರು ಸ್ವಿಸ್ ಬ್ಯಾಂಕುಗಳಲ್ಲಿ ಇರಿಸಿರುವ ಕಪ್ಪುಹಣದ ಮೊತ್ತ 1ಲಕ್ಷ ಕೋಟಿ ಡಾಲರ್ (₨ 60 ಲಕ್ಷ ಕೋಟಿ) ದಾಟಬಹುದೆಂಬ ಹೇಳಿಕೆಗಳನ್ನು ಅವರು ಅಲ್ಲಗಳೆದಿದ್ದಾರೆ.<br /> <br /> <strong>ಪಟ್ಟಿ ಪರಿಶೀಲಿಸಿ ಕ್ರಮ</strong><br /> ಸ್ವಿಟ್ಜರ್ಲೆಂಡ್ ಸರ್ಕಾರ ಸಿದ್ಧಪಡಿಸಿರುವ ಭಾರತದ ಖಾತೆದಾರರ ಪಟ್ಟಿಯನ್ನು ಕೂಲಂಕಷವಾಗಿ ಪರಿಶೀಲಿಸಲಾಗುವುದು. ಅಕ್ರಮವಾಗಿ ಹಣ ಇರಿಸಿರುವವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು.<br /> –<strong>ನ್ಯಾಯಮೂರ್ತಿ ಎಂ.ಬಿ.ಷಾ, </strong>ಕಪ್ಪುಹಣದ ತನಿಖೆಗಾಗಿ ಕೇಂದ್ರ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡದ ಮುಖ್ಯಸ್ಥರು<br /> <br /> <strong>ಪಿಡುಗು ನಿರ್ಮೂಲನೆಗೆ ಬಳಸಿ</strong><br /> </p>.<p>ಸ್ವಿಟ್ಜರ್ಲೆಂಡ್ ಬ್ಯಾಂಕ್ಗಳಲ್ಲಿ ಹಣ ಇರಿಸಿರುವ ಭಾರತದ ಖಾತೆದಾರರ ಪಟ್ಟಿ ಸಿದ್ಧವಾಗಿದೆ ಎಂಬುದನ್ನು ತಿಳಿದು ಬಹಳ ಸಂತೋಷವಾಗಿದೆ. ಒಂದು ರೀತಿಯ ನಿರಾಳ ಭಾವವೂ ಮೂಡಿದೆ. ಈ ಮಾಹಿತಿಯ ಸಂಪೂರ್ಣ ಪ್ರಯೋಜನವನ್ನು ಎನ್ಡಿಎ ಸರ್ಕಾರ ಬಳಸಿ ಕೊಳ್ಳಲಿದೆ ಎಂದು ಆಶಿಸುತ್ತೇನೆ. ಭಾರತದಿಂದ ಅಪಾರ ಪ್ರಮಾಣದ ಸಂಪನ್ಮೂಲ ಸೂರೆಗೊಂಡಿದೆ. ಈ ಹಣವನ್ನು ವಾಪಸ್ ಪಡೆದು ಅದನ್ನು ಬಡತನ ನಿರ್ಮೂಲನೆ ಹಾಗೂ ಇನ್ನಿತರ ಸಾಮಾಜಿಕ ಪಿಡುಗಗಳ ನಿವಾರಣೆಗಾಗಿ ಬಳಸಬೇಕು</p>.<p>– <strong>ರಾಮ್ ಜೇಠ್ಮಲಾನಿ,</strong> ಕಪ್ಪುಹಣದ ವಿರುದ್ಧ ಸುಪ್ರೀಂಕೋರ್ಟ್ನಲ್ಲಿ ದಾವೆ ಹೂಡಿರುವ ಹಿರಿಯ ವಕೀಲ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜೂರಿಚ್/ ನವದೆಹಲಿ (ಪಿಟಿಐ): </strong>ಸ್ವಿಟ್ಜರ್ಲೆಂಡ್ನ ಬ್ಯಾಂಕುಗಳಲ್ಲಿ ಹಣ ಇರಿಸಿರುವ ಭಾರತೀಯರ ಪಟ್ಟಿಯನ್ನು ಅಲ್ಲಿನ ಸರ್ಕಾರ ಸಿದ್ಧಪಡಿಸಿದ್ದು, ಈ ವಿವರಗಳನ್ನು ಭಾರತ ಸರ್ಕಾರದೊಂದಿಗೆ ಹಂಚಿಕೊಳ್ಳುವ ಪ್ರಕ್ರಿಯೆಗೆ ಚಾಲನೆ ಕೊಟ್ಟಿದೆ.<br /> <br /> ಹೀಗಾಗಿ ವಿದೇಶಿ ಬ್ಯಾಂಕ್ಗಳಲ್ಲಿ ಭಾರತೀಯರು ಅಕ್ರಮವಾಗಿ ಇಟ್ಟ ಕಪ್ಪುಹಣ ವಾಪಸ್ ತರಲು ಭಾರತ ನಡೆಸಿದ್ದ ಅವಿರತ ಹೋರಾಟ ಕೊನೆಗೂ ಫಲಪ್ರದವಾಗುವ ಲಕ್ಷಣ ಕಂಡುಬಂದಿದೆ.<br /> <br /> ಇದರ ನಡುವೆಯೇ, ಕಪ್ಪುಹಣ ಇರಿಸಿರುವವರ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಕೇಂದ್ರ ಸರ್ಕಾರದ ವಿಶೇಷ ತನಿಖಾ ತಂಡ (ಎಸ್ಐಟಿ) ತಿಳಿಸಿದೆ.<br /> <br /> ಸಕ್ರಮ ಖಾತೆದಾರರೂ ಇದ್ದಾರೆ: ‘ಸ್ವಿಟ್ಜರ್ಲೆಂಡ್ ಸಿದ್ಧಪಡಿಸಿರುವ ಪಟ್ಟಿಬರೀ ಕಪ್ಪುಹಣ ಹೊಂದಿದವರ ಪಟ್ಟಿಯಲ್ಲ. ಇದರಲ್ಲಿ ಕಾನೂನುಬದ್ಧವಾಗಿ ಹಣ ಇಟ್ಟವರ ಹೆಸರೂ ಸೇರಿದೆ. ಹೀಗಾಗಿ ಪಟ್ಟಿಯನ್ನು ಪರಿಶೀಲಿಸಿ ನಂತರ ತಪ್ಪಿತಸ್ಥರನ್ನು ಹುಡುಕಬೇಕಾಗುತ್ತದೆ’ ಎಂದು ಎಸ್ಐಟಿ ಮುಖ್ಯಸ್ಥ ನಿವೃತ್ತ ನ್ಯಾಯಮೂರ್ತಿ ಎಂ.ಬಿ.ಷಾ ಸ್ಪಷ್ಟಪಡಿಸಿದ್ದಾರೆ.<br /> <br /> ಕಾನೂನುಬದ್ಧವಾಗಿ ಹಣ ಇಟ್ಟವರ ಮೇಲೆ ಯಾವ ಕ್ರಮವನ್ನೂ ತೆಗೆದುಕೊಳ್ಳಲಾಗದು. ಅಕ್ರಮವಾಗಿ ಹಣ ಇರಿಸಿರುವವರ ವಿರುದ್ಧ ಮಾತ್ರ ಕ್ರಮ ತೆಗೆದುಕೊಳ್ಳಬಹುದು. ಯಾವ ರೀತಿಯಲ್ಲಿ ಹಣವನ್ನು ಠೇವಣಿ ಇರಿಸಲಾಗಿದೆ ಎಂಬುದನ್ನು ಅದು ಅವಲಂಬಿಸುತ್ತದೆ ಎಂದೂ ಅವರು ವಿವರಿಸಿದ್ದಾರೆ.<br /> <br /> <strong>ನೈಜ ವಾರಸುದಾರರು</strong>: ಸ್ವಿಟ್ಜರ್ಲೆಂಡ್ನ ವಿವಿಧ ಬ್ಯಾಂಕುಗಳಲ್ಲಿ ಇರಿಸಿರುವ ಹಣದ ನಿಜವಾದ ಒಡೆಯರು ಯಾರೆಂಬುದನ್ನು ಪತ್ತೆಹಚ್ಚುವ ಕಾರ್ಯ ನಡೆಯುತ್ತಿದ್ದು, ಅದರ ಭಾಗವಾಗಿ ಭಾರತೀಯ ಖಾತೆದಾರ ವ್ಯಕ್ತಿಗಳು ಹಾಗೂ ಸಂಸ್ಥೆಗಳ ಪಟ್ಟಿಯನ್ನು ಅಧಿಕಾರಿಗಳು ಸಿದ್ಧಪಡಿಸಿದ್ದಾರೆ ಎಂದು ಸ್ವಿಸ್ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.<br /> <br /> ವಿದೇಶಗಳಲ್ಲಿರುವ ಟ್ರಸ್ಟ್ಗಳು, ಸ್ವಿಸ್ನಲ್ಲಿ ನೆಪ ಮಾತ್ರಕ್ಕೆ ನೋಂದಣಿ ಮಾಡಿಸಲಾಗಿರುವ ಕಂಪೆನಿಗಳು ಹಾಗೂ ಇನ್ನಿತರ ಕಾನೂನುಬದ್ಧ ಸಂಸ್ಥೆಗಳ ಮೂಲಕ ಈ ಹಣವನ್ನು ಇರಿಸಲಾಗಿದೆ ಎಂದು ಅಧಿಕಾರಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.<br /> <br /> ಉಭಯ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಮಾಹಿತಿ ವಿನಿಮಯ ಒಪ್ಪಂದದ ಪ್ರಕಾರ ಇಂತಹ ಮಾಹಿತಿಗಳ ಗೋಪ್ಯತೆ ಕಾಪಾಡಬೇಕಾಗುತ್ತದೆ. ಹೀಗಾಗಿ, ತೆರಿಗೆ ರಹಿತ ಹಣ ಇರಿಸಿರುವವರ ಖಾತೆದಾರರ ಹೆಸರು, ಸಂಸ್ಥೆಗಳ ಹೆಸರು ಹಾಗೂ ಇರಿಸಿರುವ ಹಣದ ಮೊತ್ತ ಎಷ್ಟೆಂಬುದನ್ನು ಬಹಿರಂಗಗೊಳಿಸಲಾಗದು ಎಂದೂ ಸ್ಪಷ್ಟಪಡಿಸಿದ್ದಾರೆ.<br /> <br /> ಭಾರತದಲ್ಲಿ ಅಧಿಕಾರಕ್ಕೆ ಬಂದಿರುವ ಹೊಸ ಸರ್ಕಾರಕ್ಕೆ ಸಹಕರಿಸಲು ಸ್ವಿಸ್ ಇಲಾಖೆಗಳು ಉತ್ಸಾಹದಿಂದಿವೆ. ಭಾರತದಲ್ಲಿ ಕಪ್ಪುಹಣ ತನಿಖೆಗಾಗಿ ರಚಿಸಲಾಗಿರುವ ವಿಶೇಷ ತನಿಖಾ ತಂಡಕ್ಕೆ (ಎಸ್ಐಟಿ) ಎಲ್ಲಾ ರೀತಿಯ ಸಹಕಾರವನ್ನು ಈ ಇಲಾಖೆಗಳು ನೀಡಲಿವೆ ಎಂದಿದ್ದಾರೆ. ಸ್ವಿಸ್ ರಾಷ್ಟ್ರೀಯ ಬ್ಯಾಂಕು ಇತ್ತೀಚೆಗಷ್ಟೇ ಬಿಡುಗಡೆ ಮಾಡಿರುವ ಅಂಕಿ ಅಂಶದ ಪ್ರಕಾರ, ಅಲ್ಲಿನ 283 ಬ್ಯಾಂಕುಗಳಲ್ಲಿ ಎಲ್ಲಾ ವಿದೇಶಗಳ ಖಾತೆದಾರರು ಒಟ್ಟು ಇರಿಸಿರುವ ಹಣದ ಮೊತ್ತ 1.6 ಲಕ್ಷ ಕೋಟಿ ಡಾಲರ್ (ಸುಮಾರು ₨ 97 ಲಕ್ಷ ಕೋಟಿ). ಹೀಗಾಗಿ ಭಾರತೀಯರು ಸ್ವಿಸ್ ಬ್ಯಾಂಕುಗಳಲ್ಲಿ ಇರಿಸಿರುವ ಕಪ್ಪುಹಣದ ಮೊತ್ತ 1ಲಕ್ಷ ಕೋಟಿ ಡಾಲರ್ (₨ 60 ಲಕ್ಷ ಕೋಟಿ) ದಾಟಬಹುದೆಂಬ ಹೇಳಿಕೆಗಳನ್ನು ಅವರು ಅಲ್ಲಗಳೆದಿದ್ದಾರೆ.<br /> <br /> <strong>ಪಟ್ಟಿ ಪರಿಶೀಲಿಸಿ ಕ್ರಮ</strong><br /> ಸ್ವಿಟ್ಜರ್ಲೆಂಡ್ ಸರ್ಕಾರ ಸಿದ್ಧಪಡಿಸಿರುವ ಭಾರತದ ಖಾತೆದಾರರ ಪಟ್ಟಿಯನ್ನು ಕೂಲಂಕಷವಾಗಿ ಪರಿಶೀಲಿಸಲಾಗುವುದು. ಅಕ್ರಮವಾಗಿ ಹಣ ಇರಿಸಿರುವವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು.<br /> –<strong>ನ್ಯಾಯಮೂರ್ತಿ ಎಂ.ಬಿ.ಷಾ, </strong>ಕಪ್ಪುಹಣದ ತನಿಖೆಗಾಗಿ ಕೇಂದ್ರ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡದ ಮುಖ್ಯಸ್ಥರು<br /> <br /> <strong>ಪಿಡುಗು ನಿರ್ಮೂಲನೆಗೆ ಬಳಸಿ</strong><br /> </p>.<p>ಸ್ವಿಟ್ಜರ್ಲೆಂಡ್ ಬ್ಯಾಂಕ್ಗಳಲ್ಲಿ ಹಣ ಇರಿಸಿರುವ ಭಾರತದ ಖಾತೆದಾರರ ಪಟ್ಟಿ ಸಿದ್ಧವಾಗಿದೆ ಎಂಬುದನ್ನು ತಿಳಿದು ಬಹಳ ಸಂತೋಷವಾಗಿದೆ. ಒಂದು ರೀತಿಯ ನಿರಾಳ ಭಾವವೂ ಮೂಡಿದೆ. ಈ ಮಾಹಿತಿಯ ಸಂಪೂರ್ಣ ಪ್ರಯೋಜನವನ್ನು ಎನ್ಡಿಎ ಸರ್ಕಾರ ಬಳಸಿ ಕೊಳ್ಳಲಿದೆ ಎಂದು ಆಶಿಸುತ್ತೇನೆ. ಭಾರತದಿಂದ ಅಪಾರ ಪ್ರಮಾಣದ ಸಂಪನ್ಮೂಲ ಸೂರೆಗೊಂಡಿದೆ. ಈ ಹಣವನ್ನು ವಾಪಸ್ ಪಡೆದು ಅದನ್ನು ಬಡತನ ನಿರ್ಮೂಲನೆ ಹಾಗೂ ಇನ್ನಿತರ ಸಾಮಾಜಿಕ ಪಿಡುಗಗಳ ನಿವಾರಣೆಗಾಗಿ ಬಳಸಬೇಕು</p>.<p>– <strong>ರಾಮ್ ಜೇಠ್ಮಲಾನಿ,</strong> ಕಪ್ಪುಹಣದ ವಿರುದ್ಧ ಸುಪ್ರೀಂಕೋರ್ಟ್ನಲ್ಲಿ ದಾವೆ ಹೂಡಿರುವ ಹಿರಿಯ ವಕೀಲ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>