ಎಚ್.ಎಸ್. ಶಿವಪ್ರಕಾಶ್ ತಮ್ಮ ‘ಕನ್ನಡ: ಮನೆ ಉಳಿಸಿ-ಕೊಂಡೇ ಮಾರು ಗೆಲ್ಲಬೇಕು’ ಎಂಬ ಬರಹದ (ಚರ್ಚೆ, ಪ್ರ.ವಾ; ಡಿ. 4) ಕಡೆಯಲ್ಲಿ ಕೆ.ಎಸ್.ನ. ಅವರ ‘ಕನ್ನಡ ಮಾಧ್ಯಮವಾಗಲೇಬೇಕು ಕನ್ನಡ ಮಕ್ಕಳಿಗೆ...’ ಎಂಬ ಉಕ್ತಿಯನ್ನು ಉದ್ಧರಿಸಿದ್ದಾರೆ.
ವಾಸ್ತವವಾಗಿ, ಕೆ.ಎಸ್.ನ. ಹೇಳಿರುವುದು ಹೀಗೆ: ‘ಕನ್ನಡ ಮಾಧ್ಯಮವಾಗಲಿ ಮೊದಲು ಕನ್ನಡ ಕವಿಗಳಿಗೆ!’ (ಸಂಸ್ಕೃತ ಭೂಯಿಷ್ಠವಾಗಿ ಬರೆಯುವ ಕವಿಗಳನ್ನು ಕುರಿತ ವಿಡಂಬನವದು).
–ಸಿ.ಪಿ.ಕೆ., ಮೈಸೂರು