ನವದೆಹಲಿ: ವಿದೇಶಿ ಬ್ಯಾಂಕುಗಳ ಕಪ್ಪುಹಣ ಖಾತೆದಾರರ ಹೆಸರು ಬಹಿರಂಗ-ಗೊಳಿಸಲು ಒತ್ತಾಯಿಸುತ್ತಿರುವವರ ವಿರುದ್ಧ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಹರಿಹಾಯ್ದಿದ್ದು, ಹೀಗೆ ಮಾಡಿದರೆ ತನಿಖಾ ಪ್ರಕ್ರಿಯೆಗೇ ಭಂಗವುಂಟಾಗುತ್ತದೆ ಎಂದಿದ್ದಾರೆ.
ಹೆಸರುಗಳನ್ನು ಅನಧಿಕೃತವಾಗಿ ಬಿಡುಗಡೆ ಮಾಡಿದರೆ ತನಿಖೆಗೆ ಭಂಗವಾಗುವ ಜತೆಗೆ ಆರ್ಥಿಕವಾಗಿಯೂ ಕೆಟ್ಟ ಪರಿಣಾಮವುಂಟಾಗುತ್ತದೆ. ಇದರಿಂದ ತಪ್ಪಿತಸ್ಥರಿಗೇ ಅನುಕೂಲ ಮಾಡಿಕೊಟ್ಟಂತೆ ಆಗುತ್ತದೆ. ತೆರಿಗೆಗಳನ್ನು ತಡೆಹಿಡಿಯುವ ಮೂಲಕ ನಮ್ಮ ದೇಶದ ಮೇಲೆ ದಿಗ್ಬಂಧನವನ್ನೂ ವಿಧಿಸಬಹುದಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವಿವರಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಕಪ್ಪುಹಣವನ್ನು ನಯಾಪೈಸೆ ಬಿಡದೆ ವಾಪಸ್ ತರಲಾಗುವುದು ಎಂದು ಹೇಳಿರುವ ದಿನವೇ ಜೇಟ್ಲಿ ಹೀಗೆ ಹೇಳಿದ್ದಾರೆ.
ತನಿಖೆಗೆ ಏನಾದರೂ ಭಂಗವಾಗಲೆಂದೇ ಕಾಂಗ್ರೆಸ್ ಕಾಯುತ್ತಿದೆ. ಅದಕ್ಕಾಗಿಯೇ ಹೆಸರು ಬಹಿರಂಗಗೊಳಿಸುವಂತೆ ಒತ್ತಡ ಹೇರುತ್ತಿದೆ ಎಂದೂ ತಿರುಗೇಟು ನೀಡಿದ್ದಾರೆ.
*ತನಿಖೆ: ಹಿತಾಸಕ್ತಿ ರಕ್ಷಣೆಗೆ ಸ್ವಿಸ್ ಬ್ಯಾಂಕ್ಗಳ ಶತಪ್ರಯತ್ನ