ಪುಣೆಯ 6 ವರ್ಷದ ವೈಶಾಲಿ ಎಂಬ ಬಾಲಕಿಯು ಹೃದಯ ಶಸ್ತ್ರಚಿಕಿತ್ಸೆಗೆ ನೆರವಾಗುವಂತೆ ಕೋರಿ ಪ್ರಧಾನಿ ಕಾರ್ಯಾಲಯಕ್ಕೆ ಬರೆದಿದ್ದ ಪತ್ರಕ್ಕೆ ಕಾರ್ಯಾಲಯ ತಕ್ಷಣ ಸ್ಪಂದಿಸಿ ಅವಳ ಬಾಳಲ್ಲಿ ನಗು ಮೂಡುವಂತೆ ಮಾಡಿದೆ. ಇಷ್ಟೇ ಅಲ್ಲದೆ ಬಾಲಕಿಯನ್ನು ಪ್ರಧಾನಿ ಪುಣೆಯಲ್ಲಿ ಭೇಟಿಯಾಗಿ ಯೋಗಕ್ಷೇಮವನ್ನೂ ವಿಚಾರಿಸಿದ್ದಾರೆ.
ಇದು ನಿಜಕ್ಕೂ ಸಂತಸದ ವಿಚಾರ. ಇದನ್ನೆಲ್ಲಾ ಗಮನಿಸಿದಾಗ ‘ನಾನು ಪ್ರಧಾನಿಯಲ್ಲ ನಿಮ್ಮೆಲ್ಲರ ಪ್ರಧಾನ ಸೇವಕ’ ಎಂದು ನರೇಂದ್ರ ಮೋದಿ ಅವರು ಹಿಂದೊಮ್ಮೆ ಹೇಳಿದ್ದ ಮಾತು ಈ ವಿಷಯದಲ್ಲಿ ಅಕ್ಷರಶಃ ನಿಜವಾಗಿದೆ ಎನಿಸುತ್ತದೆ.