ನವದೆಹಲಿ (ಪಿಟಿಐ): ಎದೆ ಝಲ್ಲೆನೆಸುವಂತಹ ಅತ್ಯಾಚಾರ ಘಟನೆಗಳಿಗೆ ಸಂಬಂಧಿಸಿದಂತೆ ಮುಲಾಯಂ ಸಿಂಗ್ ಯಾದವ್ ಮತ್ತು ಅಖಿಲೇಶ್ ಯಾದವ್ ಅವರ ಪ್ರತಿಕ್ರಿಯೆಗಳು ಅತ್ಯಾಚಾರಿಗಳಿಗೆ ಕುಮ್ಮಕ್ಕು ನೀಡುವಂತಿವೆ ಎಂದು ಕೇಂದ್ರ ಸಚಿವೆ ಉಮಾ ಭಾರತಿ ಹರಿಹಾಯ್ದಿದ್ದಾರೆ.
ಅತ್ಯಾಚಾರ– ಕೊಲೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅಖಿಲೇಶ್ ಅವರನ್ನು ಪತ್ರಕರ್ತರೊಬ್ಬರು ಶುಕ್ರವಾರ ಪ್ರಶ್ನಿಸಿ, ‘ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸ್ಥಿತಿ ಇಷ್ಟೊಂದು ಹದಗೆಟ್ಟಿದೆಯಲ್ಲ’ ಎಂದು ಕೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಅಖಿಲೇಶ್, ‘ವೈಯಕ್ತಿಕವಾಗಿ ನಿಮಗೆ ಯಾವುದೇ ಅಪಾಯ ಎದುರಾಗಿಲ್ಲವಲ್ಲ’ ಎಂದಿದ್ದರು.