ಬೆಂಗಳೂರು: ‘ಎತ್ತಿನಹೊಳೆ ಕುಡಿಯುವ ನೀರು ಪೂರೈಕೆ ಯೋಜನೆಯನ್ನು ಸ್ಥಗಿತಗೊಳಿಸಿಲ್ಲ. ಐದು ಪ್ಯಾಕೇಜ್ಗಳಲ್ಲಿ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಶೀಘ್ರದಲ್ಲಿ ಕಾಮಗಾರಿ ಆರಂಭವಾಗಲಿದೆ’ ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ತಿಳಿಸಿದರು.
ಬಯಲುಸೀಮೆ ಶಾಸಕರ ಆಕ್ಷೇಪಕ್ಕೆ ಪ್ರತಿಕ್ರಿಯಿಸಿದ ಅವರು ₹12,912 ಕೋಟಿ ವೆಚ್ಚದ ಯೋಜನೆಗೆ 2014ರ ಫೆಬ್ರುವರಿ 17ರಂದು ಅನುಮೋದನೆ ನೀಡಲಾಗಿತ್ತು. ಈಗ ಐದು ಕಂಪೆನಿಗಳಿಗೆ ಗುತ್ತಿಗೆ ನೀಡಿದ್ದು, ಮೊದಲನೆ ಹಂತಕ್ಕೆ₹ 2,670 ಕೋಟಿ ನಿಗದಿ ಮಾಡಲಾಗಿದೆ. ಯಾವ ಸಂದರ್ಭದಲ್ಲೂ ಯೋಜನೆ ಕೈಬಿಡಲಾಗಿದೆ ಎಂಬ ಮಾತು ಹೇಳಬೇಡಿ’ ಎಂದು ಅವರು ಮನವಿ ಮಾಡಿದರು.