<p><strong>ಬೆಂಗಳೂರು:</strong> ‘ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ಸಾಹಿತ್ಯ ಲೋಕದ ಬಹುದೊಡ್ಡ ಚೇತನ. ಅವರು ತಮ್ಮ ಜತೆಗೆ ಕಿರಿಯ ಲೇಖಕರನ್ನು ಬೆಳೆಸಿದರು’ ಎಂದು ವಿದ್ವಾಂಸ ಡಾ.ಟಿ.ವಿ.ವೆಂಕಟಾಚಲಶಾಸ್ತ್ರಿ ಹೇಳಿದರು.<br /> <br /> ಮಾಸ್ತಿ ಅಧ್ಯಯನ ಪೀಠ ಮತ್ತು ಎಂವಿಜೆಕೆ ಟ್ರಸ್ಟ್ ವತಿಯಿಂದ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯಲ್ಲಿ ಶನಿವಾರ ಏರ್ಪಡಿಸಿದ್ದ ‘ಪ್ರಾಚೀನ ಕನ್ನಡ ಸಾಹಿತ್ಯ: ಮಾಸ್ತಿ ಅವರ ವಿಮರ್ಶೆ, ವಿದ್ವತ್ತೆಯ ಕೆಲಸಗಳು’ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.<br /> <br /> ‘ಮಾಸ್ತಿ ಅವರು ಸಣ್ಣ ಕತೆಗಾರ, ನಾಟಕಕಾರ, ಕಾದಂಬರಿಕಾರ ಜತೆಗೆ ಬಹುಭಾಷಾ ಪಂಡಿತರಾಗಿದ್ದರು. ಬೇರೆ ಪತ್ರಿಕೆಗಳಲ್ಲಿ ತಿರಸ್ಕೃತವಾದ ಕಿರಿಯ ಲೇಖಕರ ಲೇಖನಗಳನ್ನು ತಮ್ಮ ಪತ್ರಿಕೆಗಳಲ್ಲಿ ಪ್ರಕಟಿಸಿ ಪ್ರೋತ್ಸಾಹಿಸುತ್ತಿದ್ದರು’ ಎಂದರು.<br /> <br /> ‘ಸೃಜನಶೀಲ ಸಾಹಿತಿಯಾದ ಮಾಸ್ತಿ, ಪ್ರಾಚೀನ–ಮಧ್ಯಕಾಲೀನ ಕನ್ನಡ ಸಾಹಿತ್ಯವನ್ನು ಬಹುವಾಗಿ ಪ್ರೀತಿಸಿದರು. ಯಾವುದೇ ವಿಷಯದ ಕುರಿತು ಅವರು ತೇಲಿಕೆಯ ಹೇಳಿಕೆ ನೀಡುತ್ತಿರಲಿಲ್ಲ. ಕುಮಾರವ್ಯಾಸ ಭಾರತದ ಪರಿಷ್ಕರಣೆಯಲ್ಲಿ ಮಾಸ್ತಿ ಅವರು ಬಹುದೊಡ್ಡ ಕೆಲಸ ಮಾಡಿದ್ದಾರೆ’ ಎಂದು ಹೇಳಿದರು.<br /> <br /> ಹಾಸ್ಯ ಸಾಹಿತಿ ಪ್ರೊ.ಅ.ರಾ.ಮಿತ್ರ ಮಾತನಾಡಿ, ‘ಮಾಸ್ತಿ ಬದುಕಿನ ಸ್ವಚ್ಛತೆ ಕಡೆಗೆ ಹೆಚ್ಚು ಗಮನ ಕೊಟ್ಟವರು. ಸದಾ ಒಳ್ಳೆಯದನ್ನು ಬಯಸುತ್ತಿದ್ದರು’ ಎಂದರು. ಕಾರ್ಯಕ್ರಮದಲ್ಲಿ ಅ.ರಾ.ಮಿತ್ರ ಅವರ ‘ಹಂಸ–ಕಾಗೆ’, ‘ನೀತಿವಂತ ಹುಲಿ’ ಕೃತಿಗಳನ್ನು ಬಿಡುಗಡೆ ಮಾಡಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ಸಾಹಿತ್ಯ ಲೋಕದ ಬಹುದೊಡ್ಡ ಚೇತನ. ಅವರು ತಮ್ಮ ಜತೆಗೆ ಕಿರಿಯ ಲೇಖಕರನ್ನು ಬೆಳೆಸಿದರು’ ಎಂದು ವಿದ್ವಾಂಸ ಡಾ.ಟಿ.ವಿ.ವೆಂಕಟಾಚಲಶಾಸ್ತ್ರಿ ಹೇಳಿದರು.<br /> <br /> ಮಾಸ್ತಿ ಅಧ್ಯಯನ ಪೀಠ ಮತ್ತು ಎಂವಿಜೆಕೆ ಟ್ರಸ್ಟ್ ವತಿಯಿಂದ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯಲ್ಲಿ ಶನಿವಾರ ಏರ್ಪಡಿಸಿದ್ದ ‘ಪ್ರಾಚೀನ ಕನ್ನಡ ಸಾಹಿತ್ಯ: ಮಾಸ್ತಿ ಅವರ ವಿಮರ್ಶೆ, ವಿದ್ವತ್ತೆಯ ಕೆಲಸಗಳು’ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.<br /> <br /> ‘ಮಾಸ್ತಿ ಅವರು ಸಣ್ಣ ಕತೆಗಾರ, ನಾಟಕಕಾರ, ಕಾದಂಬರಿಕಾರ ಜತೆಗೆ ಬಹುಭಾಷಾ ಪಂಡಿತರಾಗಿದ್ದರು. ಬೇರೆ ಪತ್ರಿಕೆಗಳಲ್ಲಿ ತಿರಸ್ಕೃತವಾದ ಕಿರಿಯ ಲೇಖಕರ ಲೇಖನಗಳನ್ನು ತಮ್ಮ ಪತ್ರಿಕೆಗಳಲ್ಲಿ ಪ್ರಕಟಿಸಿ ಪ್ರೋತ್ಸಾಹಿಸುತ್ತಿದ್ದರು’ ಎಂದರು.<br /> <br /> ‘ಸೃಜನಶೀಲ ಸಾಹಿತಿಯಾದ ಮಾಸ್ತಿ, ಪ್ರಾಚೀನ–ಮಧ್ಯಕಾಲೀನ ಕನ್ನಡ ಸಾಹಿತ್ಯವನ್ನು ಬಹುವಾಗಿ ಪ್ರೀತಿಸಿದರು. ಯಾವುದೇ ವಿಷಯದ ಕುರಿತು ಅವರು ತೇಲಿಕೆಯ ಹೇಳಿಕೆ ನೀಡುತ್ತಿರಲಿಲ್ಲ. ಕುಮಾರವ್ಯಾಸ ಭಾರತದ ಪರಿಷ್ಕರಣೆಯಲ್ಲಿ ಮಾಸ್ತಿ ಅವರು ಬಹುದೊಡ್ಡ ಕೆಲಸ ಮಾಡಿದ್ದಾರೆ’ ಎಂದು ಹೇಳಿದರು.<br /> <br /> ಹಾಸ್ಯ ಸಾಹಿತಿ ಪ್ರೊ.ಅ.ರಾ.ಮಿತ್ರ ಮಾತನಾಡಿ, ‘ಮಾಸ್ತಿ ಬದುಕಿನ ಸ್ವಚ್ಛತೆ ಕಡೆಗೆ ಹೆಚ್ಚು ಗಮನ ಕೊಟ್ಟವರು. ಸದಾ ಒಳ್ಳೆಯದನ್ನು ಬಯಸುತ್ತಿದ್ದರು’ ಎಂದರು. ಕಾರ್ಯಕ್ರಮದಲ್ಲಿ ಅ.ರಾ.ಮಿತ್ರ ಅವರ ‘ಹಂಸ–ಕಾಗೆ’, ‘ನೀತಿವಂತ ಹುಲಿ’ ಕೃತಿಗಳನ್ನು ಬಿಡುಗಡೆ ಮಾಡಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>