ನವದೆಹಲಿ (ಪಿಟಿಐ): ಪ್ರಧಾನ ಮಂತ್ರಿ ‘ಜನಧನ’ ಯೋಜನೆಯ ಅಡಿಯಲ್ಲಿ ತೆರೆಯಲಾದ ಖಾತೆಗಳಲ್ಲಿ ಈವರೆಗೆ ₨ 5,400 ಕೋಟಿ ಠೇವಣಿ ಇಡಲಾಗಿದೆ.
ಸುಭಾಷ್ ಅಗರ್ವಾಲ್ ಎಂಬುವವರು ಸಲ್ಲಿಸಿದ ಮಾಹಿತಿ ಹಕ್ಕು ಅರ್ಜಿಗೆ ಹಣಕಾಸು ಇಲಾಖೆ ಈ ಮಾಹಿತಿ ನೀಡಿದೆ.
ಈಗಾಗಲೇ 7.1 ಕೋಟಿ ಖಾತೆ ತೆರೆಯಲಾಗಿದ್ದು, 5.3 ಕೋಟಿ ಖಾತೆಗಳಲ್ಲಿ ಹಣ ಇಲ್ಲ ಎಂಬ ಮಾಹಿತಿಯನ್ನು ಹಣಕಾಸು ಇಲಾಖೆ ನೀಡಿದೆ. ಬಹುತೇಕ ಖಾತೆಗಳನ್ನು (4.2 ಕೋಟಿ) ಗ್ರಾಮೀಣ ಪ್ರದೇಶದಲ್ಲಿ ತೆರೆಯಲಾಗಿವೆ. ನಗರ ಪ್ರದೇಶದಲ್ಲಿ 2.9 ಕೋಟಿ ಖಾತೆಗಳನ್ನು ತೆರೆಯಲಾಗಿದೆ.
ಹಣಕಾಸು ಸೌಲಭ್ಯಗಳು ಎಲ್ಲರಿಗೂ ತಲುಪಬೇಕು ಎಂಬ ಉದ್ದೇಶವನ್ನು ಇಟ್ಟುಕೊಂಡಿರುವ ರಾಷ್ಟ್ರೀಯ ಆರ್ಥಿಕ ಸೇರ್ಪಡೆ ಕಾರ್ಯಕ್ರಮ ಇದಾಗಿದೆ. ಈ ಮೂಲಕ ಬ್ಯಾಂಕ್ ಖಾತೆಗಳ ಮೂಲಕ ಉಳಿತಾಯ, ಹೂಡಿಕೆ, ಸಾಲ, ವಿಮೆ ಮತ್ತು ಪಿಂಚಣಿ ಸೌಲಭ್ಯವನ್ನು ಪಡೆಯಬಹುದಾಗಿದೆ.
ಈ ಹಿಂದಿನ ಯೋಜನೆಗಳು ಗ್ರಾಮಗಳನ್ನು ಕೇಂದ್ರೀಕರಿಸಿದ್ದರೆ, ಜನಧನ ಯೋಜನೆ ಕುಟುಂಬ ಕೇಂದ್ರಿತವಾಗಿದೆ.
ಆರು ತಿಂಗಳ ಕಾಲ ಖಾತೆಯನ್ನು ಸಮರ್ಪಕವಾಗಿ ನಿರ್ವಹಿಸಿದರೆ ಕುಟುಂಬವು ಬ್ಯಾಂಕ್ನಿಂದ ಐದು ಸಾವಿರ ರೂಪಾಯಿ ಪಡೆದುಕೊಳ್ಳುವುದಕ್ಕೆ ಅವಕಾಶ ಇದೆ.