ಲಂಡನ್ (ಪಿಟಿಐ): ‘ಬಲವಂತದ ದೇಶಾಂತರ’ದಲ್ಲಿದ್ದೇನೆ ಎಂದು ಹೇಳಿರುವ ಉದ್ಯಮಿ ವಿಜಯ ಮಲ್ಯ, ಭಾರತದಲ್ಲಿ ತಮಗೆ ಸಂಬಂಧಿಸಿದಂತೆ ಭಾವೋದ್ವೇಗದ ಸನ್ನಿವೇಶವಿದೆ. ಹಾಗಾಗಿ ಸದ್ಯಕ್ಕೆ ದೇಶಕ್ಕೆ ಮರಳುವುದಿಲ್ಲ ಎಂದಿದ್ದಾರೆ.
ಬ್ರಿಟನ್ನ ‘ಫೈನಾನ್ಶಿಯಲ್ ಟೈಮ್ಸ್’ ಪತ್ರಿಕೆಗೆ ಸಂದರ್ಶನ ನೀಡಿರುವ ಅವರು, ‘ಈಗ ಸ್ಥಗಿತಗೊಂಡಿರುವ ಕಿಂಗ್ಫಿಷರ್ ಏರ್ಲೈನ್ಸ್ನ ಸಾಲ ಬಾಕಿ ಇರುವ ಬ್ಯಾಂಕುಗಳ ಜತೆ ‘ವಿವೇಕಯುತ’ವಾದ ಸಂಧಾನದ ಮೂಲಕ ಬಾಕಿ ಚುಕ್ತಾಗೊಳಿಸಲು ಸಿದ್ಧ. ಆದರೆ ನನ್ನ ಪಾಸ್ಪೋರ್ಟ್ ರದ್ದುಪಡಿಸುವುದರಿಂದ ಅಥವಾ ನನ್ನನ್ನು ಬಂಧಿಸುವುದರಿಂದ ಬ್ಯಾಂಕುಗಳಿಗೆ ಹಣ ದೊರೆಯದು’ ಎಂದು ಹೇಳಿದ್ದಾರೆ.
ಐಡಿಬಿಐನಿಂದ ಪಡೆದ ₹900 ಕೋಟಿ ಸಾಲವನ್ನು ಅಕ್ರಮವಾಗಿ ವರ್ಗಾವಣೆ ಮಾಡಲಾಗಿದೆ ಎಂಬ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ವಿನಂತಿಯಂತೆ ಮಲ್ಯ ಅವರ ಪಾಸ್ಪೋರ್ಟನ್ನು ರದ್ದುಪಡಿಸಲಾಗಿದೆ.