<p>ಬೆಂಗಳೂರು: ‘ನೆನಪಿದೆ ತಾನೆ ಏಪ್ರಿಲ್ 17, ಅಂದು ಮತದಾನ ಮಾಡದಿದ್ದರೆ ಐದು ವರ್ಷ ಪಶ್ಚಾತ್ತಾಪ ಪಡಬೇಕಾಗುತ್ತದೆ... ನಾನು ಓಟ್ ಮಾಡ್ತೀನಿ, ಅದು ನನ್ನ ಜವಾಬ್ದಾರಿ’<br /> <br /> ಬಿಬಿಎಂಪಿ ಮುಂದಿನ ಎನ್.ಆರ್. ಚೌಕದಲ್ಲೀಗ ಇಂತಹ ಬರಹ ಹೊಂದಿದ ಹಳದಿಬಣ್ಣದ ಬಟ್ಟೆಗಳು ಎಲ್ಲರ ಗಮನ ಸೆಳೆಯುತ್ತಿವೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾರರಲ್ಲಿ ಜಾಗೃತಿ ಉಂಟುಮಾಡಲು ಬಿಬಿಎಂಪಿ ಹಾಗೂ ಸೃಷ್ಟಿ ವೆಂಚರ್ಸ್ ಸಂಸ್ಥೆ ಜತೆಯಾಗಿ ಈ ‘ಓಟ್ ಸ್ಪಾಟ್, ನಾನೂ ಓಟ್ ಮಾಡ್ತೀನಿ’ ಜಾಗೃತಿ ಅಭಿಯಾನ ಹಮ್ಮಿಕೊಂಡಿವೆ.<br /> <br /> ಸಂದೇಶಗಳ ಈ ವಿಶಿಷ್ಟ ಅಭಿಯಾನಕ್ಕೆ ಬಿಬಿಎಂಪಿ ಆಯುಕ್ತ ಎಂ. ಲಕ್ಷ್ಮಿನಾರಾಯಣ ‘ನಾನೂ ಓಟ್ ಮಾಡ್ತೀನಿ’ ಎಂಬ ಪ್ರತಿಜ್ಞಾ ಪತ್ರವನ್ನು ಮತಪೆಟ್ಟಿಗೆಗೆ ಹಾಕುವ ಮೂಲಕ ಚಾಲನೆ ನೀಡಿದರು.<br /> <br /> ಸಾರ್ವಜನಿಕರಿಂದ ಮತ ಹಾಕಲು ಪ್ರತಿಜ್ಞೆ ಸ್ವೀಕರಿಸಿ, ಅದರ ಪತ್ರವನ್ನು ಮತ ಪೆಟ್ಟಿಗೆಗೆ ಹಾಕಿಸಲಾಗುತ್ತಿದೆ. ಎನ್.ಆರ್. ಚೌಕದ ಸುತ್ತ ಒಟ್ಟು 150 ಬಟ್ಟೆ ಬರಹಗಳನ್ನು ತೂಗು ಬಿಡಲಾಗಿದೆ. ಪ್ರತಿಯೊಂದು ಬಟ್ಟೆಯಲ್ಲೂ ಮತದಾನ ಜಾಗೃತಿಗೆ ಒಂದೊಂದು ಸಂದೇಶವಿದೆ.<br /> <br /> ಆಕರ್ಷಕ ಅಕ್ಷರಗಳಲ್ಲಿ ಬರೆಯಲಾದ ಈ ಸಂದೇಶಗಳು ರಸ್ತೆಯಲ್ಲಿ ಸಂಚರಿಸುವವರನ್ನು ತಟ್ಟನೆ ತಮ್ಮತ್ತ ಸೆಳೆಯುವಂತೆ ಮಾಡುತ್ತವೆ. ‘ಎನ್.ಆರ್. ಚೌಕ 7,200 ಚದರ ಅಡಿ ವಿಸ್ತೀರ್ಣ ಹೊಂದಿದ್ದು, ಪ್ರಮುಖ ರಸ್ತೆಗಳೆಲ್ಲ ಇಲ್ಲಿ ಸಂಧಿಸುತ್ತವೆ.<br /> <br /> ನಿತ್ಯ ಐದು ಲಕ್ಷದಷ್ಟು ವಾಹನಗಳು ಈ ಚೌಕದ ಮೂಲಕ ಸಂಚರಿಸುತ್ತವೆ. ವಾಹನ ದಟ್ಟಣೆ ಹೆಚ್ಚಾಗಿರುವ ಕಾರಣ ಸಂಚಾರದ ವೇಗವೂ ಕಡಿಮೆ ಆಗಿರುತ್ತದೆ. ವಾಹನ ಸವಾರರನ್ನು ಈ ಸಂದೇಶಗಳು ತಲುಪಲಿವೆ’ ಎಂದು ಸೃಷ್ಟಿ ವೆಂಚರ್ಸ್ನ ನಾಗರಾಜ ನಾವುಂದ ಹೇಳುತ್ತಾರೆ.<br /> <br /> ‘ಪರಿಸರ ಸ್ನೇಹಿಯಾದ ಜಾಹೀರಾತು ವಿಧಾನವನ್ನು ನಾವು ಕಂಡುಕೊಂಡಿದ್ದೇವೆ. ಬಟ್ಟೆ ಹಾಗೂ ನೈಸರ್ಗಿಕ ಬಣ್ಣವನ್ನು ಮಾತ್ರ ಬಳಕೆ ಮಾಡಿದ್ದೇವೆ. 30 ಜನ ಕಲಾವಿದರ ಸಹಕಾರದಿಂದ ಈ ಬಟ್ಟೆ ಬರಹಗಳನ್ನು ಸಿದ್ಧಪಡಿಸಿದ್ದೇವೆ’ ಎಂದರು.<br /> <br /> ‘ಆಟೊ ಚಾಲಕರು, ವಕೀಲರು, ಶಾಲಾ ಮಕ್ಕಳು ಹಾಗೂ ವಿವಿಧ ವೃತ್ತಿಗಳ ಜನರನ್ನು ಕರೆತಂದು ಜಾಗೃತಿ ಅಭಿಯಾನ ನಡೆಸಲಾಗುತ್ತದೆ. ಯೂತ್ ಫಾರ್ ಸೇವಾ ಸಂಘಟನೆ ಕಾರ್ಯಕರ್ತರು ಮತದಾನ ಜಾಗೃತಿ ನಾಟಕವನ್ನೂ ಪ್ರದರ್ಶನ ಮಾಡಲಿದ್ದಾರೆ’ ಎಂದು ಅವರು ಮಾಹಿತಿ ನೀಡುತ್ತಾರೆ.<br /> <br /> ‘ಬೆಂಗಳೂರು ನಗರ ಜಿಲ್ಲೆಯಲ್ಲಿ ಶೇ 75ರಷ್ಟು ಮತದಾನದ ಗುರಿ ಹೊಂದಲಾಗಿದೆ’ ಆಯುಕ್ತ ಎಂದು ಲಕ್ಷ್ಮಿನಾರಾಯಣ ತಿಳಿಸುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ‘ನೆನಪಿದೆ ತಾನೆ ಏಪ್ರಿಲ್ 17, ಅಂದು ಮತದಾನ ಮಾಡದಿದ್ದರೆ ಐದು ವರ್ಷ ಪಶ್ಚಾತ್ತಾಪ ಪಡಬೇಕಾಗುತ್ತದೆ... ನಾನು ಓಟ್ ಮಾಡ್ತೀನಿ, ಅದು ನನ್ನ ಜವಾಬ್ದಾರಿ’<br /> <br /> ಬಿಬಿಎಂಪಿ ಮುಂದಿನ ಎನ್.ಆರ್. ಚೌಕದಲ್ಲೀಗ ಇಂತಹ ಬರಹ ಹೊಂದಿದ ಹಳದಿಬಣ್ಣದ ಬಟ್ಟೆಗಳು ಎಲ್ಲರ ಗಮನ ಸೆಳೆಯುತ್ತಿವೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾರರಲ್ಲಿ ಜಾಗೃತಿ ಉಂಟುಮಾಡಲು ಬಿಬಿಎಂಪಿ ಹಾಗೂ ಸೃಷ್ಟಿ ವೆಂಚರ್ಸ್ ಸಂಸ್ಥೆ ಜತೆಯಾಗಿ ಈ ‘ಓಟ್ ಸ್ಪಾಟ್, ನಾನೂ ಓಟ್ ಮಾಡ್ತೀನಿ’ ಜಾಗೃತಿ ಅಭಿಯಾನ ಹಮ್ಮಿಕೊಂಡಿವೆ.<br /> <br /> ಸಂದೇಶಗಳ ಈ ವಿಶಿಷ್ಟ ಅಭಿಯಾನಕ್ಕೆ ಬಿಬಿಎಂಪಿ ಆಯುಕ್ತ ಎಂ. ಲಕ್ಷ್ಮಿನಾರಾಯಣ ‘ನಾನೂ ಓಟ್ ಮಾಡ್ತೀನಿ’ ಎಂಬ ಪ್ರತಿಜ್ಞಾ ಪತ್ರವನ್ನು ಮತಪೆಟ್ಟಿಗೆಗೆ ಹಾಕುವ ಮೂಲಕ ಚಾಲನೆ ನೀಡಿದರು.<br /> <br /> ಸಾರ್ವಜನಿಕರಿಂದ ಮತ ಹಾಕಲು ಪ್ರತಿಜ್ಞೆ ಸ್ವೀಕರಿಸಿ, ಅದರ ಪತ್ರವನ್ನು ಮತ ಪೆಟ್ಟಿಗೆಗೆ ಹಾಕಿಸಲಾಗುತ್ತಿದೆ. ಎನ್.ಆರ್. ಚೌಕದ ಸುತ್ತ ಒಟ್ಟು 150 ಬಟ್ಟೆ ಬರಹಗಳನ್ನು ತೂಗು ಬಿಡಲಾಗಿದೆ. ಪ್ರತಿಯೊಂದು ಬಟ್ಟೆಯಲ್ಲೂ ಮತದಾನ ಜಾಗೃತಿಗೆ ಒಂದೊಂದು ಸಂದೇಶವಿದೆ.<br /> <br /> ಆಕರ್ಷಕ ಅಕ್ಷರಗಳಲ್ಲಿ ಬರೆಯಲಾದ ಈ ಸಂದೇಶಗಳು ರಸ್ತೆಯಲ್ಲಿ ಸಂಚರಿಸುವವರನ್ನು ತಟ್ಟನೆ ತಮ್ಮತ್ತ ಸೆಳೆಯುವಂತೆ ಮಾಡುತ್ತವೆ. ‘ಎನ್.ಆರ್. ಚೌಕ 7,200 ಚದರ ಅಡಿ ವಿಸ್ತೀರ್ಣ ಹೊಂದಿದ್ದು, ಪ್ರಮುಖ ರಸ್ತೆಗಳೆಲ್ಲ ಇಲ್ಲಿ ಸಂಧಿಸುತ್ತವೆ.<br /> <br /> ನಿತ್ಯ ಐದು ಲಕ್ಷದಷ್ಟು ವಾಹನಗಳು ಈ ಚೌಕದ ಮೂಲಕ ಸಂಚರಿಸುತ್ತವೆ. ವಾಹನ ದಟ್ಟಣೆ ಹೆಚ್ಚಾಗಿರುವ ಕಾರಣ ಸಂಚಾರದ ವೇಗವೂ ಕಡಿಮೆ ಆಗಿರುತ್ತದೆ. ವಾಹನ ಸವಾರರನ್ನು ಈ ಸಂದೇಶಗಳು ತಲುಪಲಿವೆ’ ಎಂದು ಸೃಷ್ಟಿ ವೆಂಚರ್ಸ್ನ ನಾಗರಾಜ ನಾವುಂದ ಹೇಳುತ್ತಾರೆ.<br /> <br /> ‘ಪರಿಸರ ಸ್ನೇಹಿಯಾದ ಜಾಹೀರಾತು ವಿಧಾನವನ್ನು ನಾವು ಕಂಡುಕೊಂಡಿದ್ದೇವೆ. ಬಟ್ಟೆ ಹಾಗೂ ನೈಸರ್ಗಿಕ ಬಣ್ಣವನ್ನು ಮಾತ್ರ ಬಳಕೆ ಮಾಡಿದ್ದೇವೆ. 30 ಜನ ಕಲಾವಿದರ ಸಹಕಾರದಿಂದ ಈ ಬಟ್ಟೆ ಬರಹಗಳನ್ನು ಸಿದ್ಧಪಡಿಸಿದ್ದೇವೆ’ ಎಂದರು.<br /> <br /> ‘ಆಟೊ ಚಾಲಕರು, ವಕೀಲರು, ಶಾಲಾ ಮಕ್ಕಳು ಹಾಗೂ ವಿವಿಧ ವೃತ್ತಿಗಳ ಜನರನ್ನು ಕರೆತಂದು ಜಾಗೃತಿ ಅಭಿಯಾನ ನಡೆಸಲಾಗುತ್ತದೆ. ಯೂತ್ ಫಾರ್ ಸೇವಾ ಸಂಘಟನೆ ಕಾರ್ಯಕರ್ತರು ಮತದಾನ ಜಾಗೃತಿ ನಾಟಕವನ್ನೂ ಪ್ರದರ್ಶನ ಮಾಡಲಿದ್ದಾರೆ’ ಎಂದು ಅವರು ಮಾಹಿತಿ ನೀಡುತ್ತಾರೆ.<br /> <br /> ‘ಬೆಂಗಳೂರು ನಗರ ಜಿಲ್ಲೆಯಲ್ಲಿ ಶೇ 75ರಷ್ಟು ಮತದಾನದ ಗುರಿ ಹೊಂದಲಾಗಿದೆ’ ಆಯುಕ್ತ ಎಂದು ಲಕ್ಷ್ಮಿನಾರಾಯಣ ತಿಳಿಸುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>