ಭೂಮಿ, ಜಲ, ಅಗ್ನಿ, ವಾಯು, ಆಕಾಶ ಇವುಗಳನ್ನು ಪಂಚಭೂತಗಳೆನ್ನುತ್ತಾರೆ. ಯಾವುದೇ ವ್ಯಕ್ತಿಯ ಅಂತ್ಯ ಸಂಸ್ಕಾರ ಆದ ನಂತರ ಪತ್ರಿಕೆಗಳು ‘ದೇಹ ಪಂಚಭೂತಗಳಲ್ಲಿ ಲೀನ’ ಎಂದು ವರದಿ ಮಾಡುತ್ತವೆ. ಆದರೆ ದೇಹ ದಹನವಾದ ನಂತರ ಪಂಚಭೂತಗಳಲ್ಲಿ ನಾಲ್ಕು ಅಂಶಗಳಲ್ಲಿ ಮಾತ್ರ ಲೀನವಾಗುತ್ತದೆ. ಭೂಮಿ, ಅಗ್ನಿ, ವಾಯು ಮತ್ತು ಆಕಾಶ. ಚಿತಾ ಭಸ್ಮವನ್ನು ನೀರಿನಲ್ಲಿ ಬಿಟ್ಟಾಗಲೇ ಅದು ಪಂಚಭೂತಗಳಲ್ಲಿ ಲೀನವಾಗುವುದು. ಆದ ಕಾರಣ ಚಿತಾ ಭಸ್ಮವನ್ನು ನೀರಿನಲ್ಲಿ ಬಿಡುವವರೆಗೆ ‘ಪಂಚಭೂತಗಳಲ್ಲಿ ಲೀನ’ ಎಂಬ ಪದಪ್ರಯೋಗ ಸೂಕ್ತವಲ್ಲ ಎನ್ನುವುದು ನನ್ನ ಅಭಿಪ್ರಾಯ.