ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿಯು ಈ ವರ್ಷ ಹಮ್ಮಿಕೊಂಡಿರುವ ‘ಪ್ರವಾಸ ಅನುದಾನ’ ಯೋಜನೆಗೆ ಲೇಖಕರಿಂದ ಅರ್ಜಿ ಆಹ್ವಾನಿಸಲಾಗಿದೆ.
ಇದರ ಅಡಿಯಲ್ಲಿ ಆರು ಲೇಖಕರನ್ನು ಅಕಾಡೆಮಿ ಆಯ್ಕೆ ಮಾಡಲಿದೆ. ಆಯ್ಕೆಯಾದ ಲೇಖಕರು ವಿವಿಧ ರಾಜ್ಯಗಳಲ್ಲಿ ಪ್ರವಾಸ ಕೈಗೊಂಡು ಅವುಗಳ ಸಾಹಿತ್ಯ, ಸಾಂಸ್ಕೃತಿಕ, ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ವಿಚಾರಗಳನ್ನು ಆಧರಿಸಿ ಪ್ರವಾಸ ಕಥನವನ್ನು ಬರೆಯಬೇಕಾಗುತ್ತದೆ.
ಅರ್ಜಿ ಸಲ್ಲಿಸಲು ಕೊನೆಯ. ದಿನ ನವೆಂಬರ್ 22. ಹೆಚ್ಚಿನ ವಿವರಗಳಿಗೆ ಅಕಾಡೆಮಿ ವೆಬ್ಸೈಟ್ www.karnatakasahithyaacademy.orgಗೆ ಭೇಟಿ ನೀಡುವಂತೆ ಎಂದು ಪ್ರಕಟಣೆ ತಿಳಿಸಿದೆ.