<p><strong>ಗೋಣಿಕೊಪ್ಪಲು</strong>: ಕಲೆ ಮತ್ತು ಸಾಹಿತ್ಯದ ಮೂಲಕ ಸಮಾಜದ ಓರೆ ಕೋರೆಗಳನ್ನು ತಿದ್ದಿ ಆದರ್ಶ ಸಮಾಜ ನಿರ್ಮಾಣದ ಕನಸು ಕಂಡಿದ್ದ ಹರದಾಸ ಅಪ್ಪನೆರಂಡ ಅಪ್ಪಚ್ಚ ಕವಿ ಬಗ್ಗೆ ಯುವಜನತೆಗೆ ಅರಿವು ಮೂಡಿಸಬೇಕಾದ ಅಗತ್ಯವಿದೆ ಎಂದು ಬಾಳೆಲೆ ಕಾಫಿ ಬೆಳೆಗಾರ ಕಳ್ಳಿಚಂಡ ಪ್ರಕಾಶ್ ಹೇಳಿದರು.<br /> <br /> ಸಮೀಪದ ಬಾಳೆಲೆ ವಿಜಯಲಕ್ಷ್ಮೀ ಪದವಿಪೂರ್ವ ಕಾಲೇಜಿನಲ್ಲಿ ವಿರಾಜಪೇಟೆ ಅಪ್ಪಚ್ಚ ಕವಿ ಪ್ರತಿಮೆ ನಿರ್ಮಾಣ ಸಮಿತಿ ಮತ್ತು ತೂಕ್ ಬೊಳಕ್ ಕಲೆ ಕ್ರೀಡಾ ಅಕಾಡೆಮಿ ಜಂಟಿಯಾಗಿ ಸೋಮವಾರ ಹಮ್ಮಿಕೊಂಡಿದ್ದ ಅಪ್ಪಚ್ಚಕವಿ ಪ್ರತಿಮೆ ಮೆರವಣಿಗೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.<br /> <br /> ಓದುವುದಕ್ಕೆ ಆರ್ಥಿಕವಾಗಿ ಬಹಳ ಕಷ್ಟವಿದ್ದ ಸಂದರ್ಭದಲ್ಲಿ ಅಪ್ಪಚ್ಚಕವಿ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದರು. ಆದರೂ ತಮ್ಮ ಪರಿಶ್ರಮದ ಮೂಲಕ ಪುರಾಣ ಗ್ರಂಥಗಳನ್ನು ಓದಿ, ಕೇಳಿ ತಿಳಿದುಕೊಂಡಿದ್ದರು. ಕವಿತೆಗಳನ್ನು ರಚಿಸಿ ಹಾಡುತ್ತಿದ್ದರು. ಹೀಗಾಗಿ ಕವಿ ಎಂಬ ಹೆಸರನ್ನು ಗಳಿಸಿಕೊಂಡರು.<br /> ಅಪ್ಪಚ್ಚ ಕವಿಯ ನಡೆ ನುಡಿ ಯುವಜನಾಂಗಕ್ಕೆ ದಾರಿದೀಪವಾಗಬೇಕು. ‘ಅಂಬಿಕೆ ಸುಗಮಾಡು ಈ ಜಗಕೆ’ ಎಂದು ಜಗತ್ತಿಗೆ ಸುಖ ಬಯಸಿದ ಕವಿಯ ಸ್ಮರಣೆ ಅಗತ್ಯ ಎಂದು ನುಡಿದರು.<br /> <br /> ಬಾಳೆಲೆ ಕೊಡವ ಸಮಾಜದ ಅಧ್ಕಕ್ಷ ಮಲಚೀರ್ ಬೋಸ್ ಮಾತನಾಡಿ, ಕವಿಯ ಪ್ರತಿಮೆ ಸ್ಥಾಪನೆ ಮೂಲಕ ಮುಂದಿನ ಪೀಳಿಗೆಗೆ ಕವಿಯ ಪರಿಚಯಕ್ಕೆ ಅವಕಾಶ ನೀಡಿದಂತಾಗುತ್ತದೆ. ಜಾತಿಮತ ಭೇದ ಮರೆತು ಎಲ್ಲರೂ ಕೈಜೋಡಿಸಿದಾಗ ಮಾತ್ರ ಪ್ರತಿಮೆ ಅನಾವರಣ ಕಾರ್ಯಕ್ರಮ ಸುಲಭವಾಗಿ ಜರುಗಲಿದೆ ಎಂದು ಹೇಳಿದರು.<br /> <br /> ಪ್ರಾಂಶುಪಾಲ ಶ್ರೀಮೂರ್ತಿ , ಮುಕ್ಕಾಟೀರ ಪೊನ್ನಪ್ಪ, ಐನಂಡ ಕಾರ್ಯಪ್ಪ, ಕೋಲತಂಡ ಕುಟ್ಟಪ್ಪ, ಕಳ್ಳೇಂಗಡ ಶಾಂತು ಉತ್ತಯ್ಯ ಮುಂತಾದವರು ಹಾಜರಿದ್ದರು.<br /> <br /> ಪ್ರತಿಮೆ ಸ್ಥಾಪನಾ ಸಮಿತಿ ಅಧ್ಯಕ್ಷ ಮುಲ್ಲೇಂಗಡ ಶಂಕರಿ ಪೊನ್ನಪ್ಪ ಅಧ್ಯಕ್ಷೆ ವಹಿಸಿದ್ದರು<br /> .<br /> ನಾಟಿ ವೈದ್ಯ ದೇರಪಂಡ ಗಣಪತಿ ಮತ್ತು ರೇವತಿ ಗಣಪತಿ, ಕೊಡವ ಸಮಾಜದ ಅಧ್ಯಕ್ಷ ಮಲಚೀರ ಬೋಸ್ ಅವರನ್ನು ಸನ್ಮಾನಿಸಲಾಯಿತು. ಉಪನ್ಯಾಸಕಿ ಕೆ.ಪಿ. ಪೊನ್ನಮ್ಮ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗೋಣಿಕೊಪ್ಪಲು</strong>: ಕಲೆ ಮತ್ತು ಸಾಹಿತ್ಯದ ಮೂಲಕ ಸಮಾಜದ ಓರೆ ಕೋರೆಗಳನ್ನು ತಿದ್ದಿ ಆದರ್ಶ ಸಮಾಜ ನಿರ್ಮಾಣದ ಕನಸು ಕಂಡಿದ್ದ ಹರದಾಸ ಅಪ್ಪನೆರಂಡ ಅಪ್ಪಚ್ಚ ಕವಿ ಬಗ್ಗೆ ಯುವಜನತೆಗೆ ಅರಿವು ಮೂಡಿಸಬೇಕಾದ ಅಗತ್ಯವಿದೆ ಎಂದು ಬಾಳೆಲೆ ಕಾಫಿ ಬೆಳೆಗಾರ ಕಳ್ಳಿಚಂಡ ಪ್ರಕಾಶ್ ಹೇಳಿದರು.<br /> <br /> ಸಮೀಪದ ಬಾಳೆಲೆ ವಿಜಯಲಕ್ಷ್ಮೀ ಪದವಿಪೂರ್ವ ಕಾಲೇಜಿನಲ್ಲಿ ವಿರಾಜಪೇಟೆ ಅಪ್ಪಚ್ಚ ಕವಿ ಪ್ರತಿಮೆ ನಿರ್ಮಾಣ ಸಮಿತಿ ಮತ್ತು ತೂಕ್ ಬೊಳಕ್ ಕಲೆ ಕ್ರೀಡಾ ಅಕಾಡೆಮಿ ಜಂಟಿಯಾಗಿ ಸೋಮವಾರ ಹಮ್ಮಿಕೊಂಡಿದ್ದ ಅಪ್ಪಚ್ಚಕವಿ ಪ್ರತಿಮೆ ಮೆರವಣಿಗೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.<br /> <br /> ಓದುವುದಕ್ಕೆ ಆರ್ಥಿಕವಾಗಿ ಬಹಳ ಕಷ್ಟವಿದ್ದ ಸಂದರ್ಭದಲ್ಲಿ ಅಪ್ಪಚ್ಚಕವಿ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದರು. ಆದರೂ ತಮ್ಮ ಪರಿಶ್ರಮದ ಮೂಲಕ ಪುರಾಣ ಗ್ರಂಥಗಳನ್ನು ಓದಿ, ಕೇಳಿ ತಿಳಿದುಕೊಂಡಿದ್ದರು. ಕವಿತೆಗಳನ್ನು ರಚಿಸಿ ಹಾಡುತ್ತಿದ್ದರು. ಹೀಗಾಗಿ ಕವಿ ಎಂಬ ಹೆಸರನ್ನು ಗಳಿಸಿಕೊಂಡರು.<br /> ಅಪ್ಪಚ್ಚ ಕವಿಯ ನಡೆ ನುಡಿ ಯುವಜನಾಂಗಕ್ಕೆ ದಾರಿದೀಪವಾಗಬೇಕು. ‘ಅಂಬಿಕೆ ಸುಗಮಾಡು ಈ ಜಗಕೆ’ ಎಂದು ಜಗತ್ತಿಗೆ ಸುಖ ಬಯಸಿದ ಕವಿಯ ಸ್ಮರಣೆ ಅಗತ್ಯ ಎಂದು ನುಡಿದರು.<br /> <br /> ಬಾಳೆಲೆ ಕೊಡವ ಸಮಾಜದ ಅಧ್ಕಕ್ಷ ಮಲಚೀರ್ ಬೋಸ್ ಮಾತನಾಡಿ, ಕವಿಯ ಪ್ರತಿಮೆ ಸ್ಥಾಪನೆ ಮೂಲಕ ಮುಂದಿನ ಪೀಳಿಗೆಗೆ ಕವಿಯ ಪರಿಚಯಕ್ಕೆ ಅವಕಾಶ ನೀಡಿದಂತಾಗುತ್ತದೆ. ಜಾತಿಮತ ಭೇದ ಮರೆತು ಎಲ್ಲರೂ ಕೈಜೋಡಿಸಿದಾಗ ಮಾತ್ರ ಪ್ರತಿಮೆ ಅನಾವರಣ ಕಾರ್ಯಕ್ರಮ ಸುಲಭವಾಗಿ ಜರುಗಲಿದೆ ಎಂದು ಹೇಳಿದರು.<br /> <br /> ಪ್ರಾಂಶುಪಾಲ ಶ್ರೀಮೂರ್ತಿ , ಮುಕ್ಕಾಟೀರ ಪೊನ್ನಪ್ಪ, ಐನಂಡ ಕಾರ್ಯಪ್ಪ, ಕೋಲತಂಡ ಕುಟ್ಟಪ್ಪ, ಕಳ್ಳೇಂಗಡ ಶಾಂತು ಉತ್ತಯ್ಯ ಮುಂತಾದವರು ಹಾಜರಿದ್ದರು.<br /> <br /> ಪ್ರತಿಮೆ ಸ್ಥಾಪನಾ ಸಮಿತಿ ಅಧ್ಯಕ್ಷ ಮುಲ್ಲೇಂಗಡ ಶಂಕರಿ ಪೊನ್ನಪ್ಪ ಅಧ್ಯಕ್ಷೆ ವಹಿಸಿದ್ದರು<br /> .<br /> ನಾಟಿ ವೈದ್ಯ ದೇರಪಂಡ ಗಣಪತಿ ಮತ್ತು ರೇವತಿ ಗಣಪತಿ, ಕೊಡವ ಸಮಾಜದ ಅಧ್ಯಕ್ಷ ಮಲಚೀರ ಬೋಸ್ ಅವರನ್ನು ಸನ್ಮಾನಿಸಲಾಯಿತು. ಉಪನ್ಯಾಸಕಿ ಕೆ.ಪಿ. ಪೊನ್ನಮ್ಮ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>