<p>ಬೆಂಗಳೂರು: ‘ಬದುಕು ಮತ್ತು ಬರಹಗಳಲ್ಲಿ ತಾದಾತ್ಮ್ಯ ಸಾಧಿಸಿರುವ ಹೊ.ಶ್ರೀನಿವಾಸಯ್ಯ ಅವರು ಜೀವನದುದ್ದಕ್ಕೂ ಗಾಂಧೀಜಿಯವರ ಆದರ್ಶವನ್ನು ಮೈಗೂಡಿಸಿಕೊಂಡು ಬದುಕುತ್ತಿರುವ ಬೆರಳೆಣಿಕೆ ಜನರಲ್ಲಿ ಒಬ್ಬರು’ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಹಿ.ಚಿ. ಬೋರಲಿಂಗಯ್ಯ ಅಭಿಪ್ರಾಯಪಟ್ಟರು.<br /> <br /> ನಗರದಲ್ಲಿ ಬುಧವಾರ ಸಿವಿಜಿ ಇಂಡಿಯಾ ಪುಸ್ತಕ ಪ್ರಕಾಶನದ ಆಶ್ರಯದಲ್ಲಿ ನಡೆದ ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ಡಾ.ಹೊ. ಶ್ರೀನಿವಾಸಯ್ಯ ಅವರ ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.<br /> <br /> ‘ಬೆಂಗಳೂರಿನಂತಹ ನಗರದಲ್ಲಿ ಜನಿಸಿ, ಗ್ರಾಮೀಣ ಭಾರತ ಕುರಿತು ಅಪಾರ ಒಲವು ಹೊಂದಿರುವ ಶ್ರೀನಿವಾಸಯ್ಯ ಅವರು ನಗರ ಮತ್ತು ಗ್ರಾಮೀಣ ಭಾರತದ ಕೊಂಡಿ. ತಮ್ಮ ಸುದೀರ್ಘ ಜೀವನದಲ್ಲಿ ಕಂಡಿರುವ 20 ಮತ್ತು 21ನೇ ಶತಮಾನಗಳ ವಿದ್ಯಮಾನ ತುಲನೆ ಮಾಡುವಂತೆ ಅವರ ಬರಹಗಳಿವೆ’ ಎಂದರು.<br /> <br /> ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್ ಮಾತನಾಡಿ, ‘ತಮ್ಮನ್ನು ತಾವು ಪ್ರಯೋಗಕ್ಕೆ ಒಡ್ಡಿಕೊಂಡು ಜೀವನ ಶಕ್ತಿಯನ್ನು ವೃದ್ಧಿಸಿಕೊಂಡ ಕ್ರಮ ಶ್ರೀನಿವಾಸಯ್ಯ ಅವರು ರಚಿಸಿರುವ ಕೃತಿಗಳಲ್ಲಿ ಕಾಣುತ್ತದೆ’ ಎಂದು ಹೇಳಿದರು.<br /> <br /> ‘ಮೌನ ತಪಸ್ವಿಯಾಗಿದ್ದುಕೊಂಡು ಶ್ರೀನಿವಾಸಯ್ಯ ಅವರ ಇಡೀ ಬರವಣಿಗೆ ಮತ್ತು ಬದುಕನ್ನು ಅರಳಿಸುವಲ್ಲಿ ಅವರ ಧರ್ಮಪತ್ನಿ ಜಯಲಕ್ಷಮ್ಮ ಅವರ ಪಾತ್ರ ಹಿರಿದು’ ಎಂದು ತಿಳಿಸಿದರು.<br /> <br /> ಇದೇ ಸಂದರ್ಭದಲ್ಲಿ ಶ್ರೀನಿವಾಸಯ್ಯ ಅವರ ಕೃತಿಗಳನ್ನು ಕುರಿತು ‘ಪ್ರಜಾವಾಣಿ’ಯ ಮುಖ್ಯ ಉಪಸಂಪಾದಕ ಡಾ.ಜಿ.ಬಿ.ಹರೀಶ್, ವಿಮರ್ಶಕ ಡಾ.ಬೈರಮಂಗಲ ರಾಮೇಗೌಡ, ಗ್ರಂಥಾಲಯ ಇಲಾಖೆಯ ನಿವೃತ್ತ ನಿರ್ದೇಶಕ ಕೆ.ಜಿ.ವೆಂಕಟೇಶ್ ಅವರು ಮಾತನಾಡಿದರು.<br /> <br /> ಆದಿಚುಂಚನಗಿರಿಯ ವಿಜಯನಗರ ಶಾಖಾ ಮಠದ ಸೌಮ್ಯನಾಥ ಸ್ವಾಮೀಜಿ, ಡಾ.ಹೊ.ಶ್ರೀನಿವಾಸಯ್ಯ, ಪುಸ್ತಕ ಪ್ರಕಾಶನದ ಸಿವಿಜಿ ಚಂದ್ರು ಮತ್ತು ಗಿರಿಜಾ ಚಂದ್ರು ಉಪಸ್ಥಿತರಿದ್ದರು.<br /> <br /> <strong>ಬಿಡುಗಡೆಯಾದ ಕೃತಿಗಳು</strong><br /> ಬಾಳ ಹಾದಿ (ಆತ್ಮಕಥೆ), ತಂತ್ರಜ್ಞಾನ ಜನಕರು, ಕೈಗಾರಿಕೆ ಜನಕರು (ವ್ಯಕ್ತಿಚಿತ್ರಗಳು), ಆರೋಗ್ಯವೇ ಭಾಗ್ಯ (ಆರೋಗ್ಯ ಚಿಂತನೆ), ನೀರೇ ಔಷಧಿ (ಪ್ರಕೃತಿ ಚಿಕಿತ್ಸೆ), ರಾಮಯ್ಯ ಕಂಡ ಜರ್ಮನಿ ಮತ್ತು ಸಿಂಹಳದಲ್ಲಿ ಶಶಿ (ಮಕ್ಕಳಿಗಾಗಿ ಪ್ರವಾಸ ಕಥನಗಳು)</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ‘ಬದುಕು ಮತ್ತು ಬರಹಗಳಲ್ಲಿ ತಾದಾತ್ಮ್ಯ ಸಾಧಿಸಿರುವ ಹೊ.ಶ್ರೀನಿವಾಸಯ್ಯ ಅವರು ಜೀವನದುದ್ದಕ್ಕೂ ಗಾಂಧೀಜಿಯವರ ಆದರ್ಶವನ್ನು ಮೈಗೂಡಿಸಿಕೊಂಡು ಬದುಕುತ್ತಿರುವ ಬೆರಳೆಣಿಕೆ ಜನರಲ್ಲಿ ಒಬ್ಬರು’ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಹಿ.ಚಿ. ಬೋರಲಿಂಗಯ್ಯ ಅಭಿಪ್ರಾಯಪಟ್ಟರು.<br /> <br /> ನಗರದಲ್ಲಿ ಬುಧವಾರ ಸಿವಿಜಿ ಇಂಡಿಯಾ ಪುಸ್ತಕ ಪ್ರಕಾಶನದ ಆಶ್ರಯದಲ್ಲಿ ನಡೆದ ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ಡಾ.ಹೊ. ಶ್ರೀನಿವಾಸಯ್ಯ ಅವರ ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.<br /> <br /> ‘ಬೆಂಗಳೂರಿನಂತಹ ನಗರದಲ್ಲಿ ಜನಿಸಿ, ಗ್ರಾಮೀಣ ಭಾರತ ಕುರಿತು ಅಪಾರ ಒಲವು ಹೊಂದಿರುವ ಶ್ರೀನಿವಾಸಯ್ಯ ಅವರು ನಗರ ಮತ್ತು ಗ್ರಾಮೀಣ ಭಾರತದ ಕೊಂಡಿ. ತಮ್ಮ ಸುದೀರ್ಘ ಜೀವನದಲ್ಲಿ ಕಂಡಿರುವ 20 ಮತ್ತು 21ನೇ ಶತಮಾನಗಳ ವಿದ್ಯಮಾನ ತುಲನೆ ಮಾಡುವಂತೆ ಅವರ ಬರಹಗಳಿವೆ’ ಎಂದರು.<br /> <br /> ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್ ಮಾತನಾಡಿ, ‘ತಮ್ಮನ್ನು ತಾವು ಪ್ರಯೋಗಕ್ಕೆ ಒಡ್ಡಿಕೊಂಡು ಜೀವನ ಶಕ್ತಿಯನ್ನು ವೃದ್ಧಿಸಿಕೊಂಡ ಕ್ರಮ ಶ್ರೀನಿವಾಸಯ್ಯ ಅವರು ರಚಿಸಿರುವ ಕೃತಿಗಳಲ್ಲಿ ಕಾಣುತ್ತದೆ’ ಎಂದು ಹೇಳಿದರು.<br /> <br /> ‘ಮೌನ ತಪಸ್ವಿಯಾಗಿದ್ದುಕೊಂಡು ಶ್ರೀನಿವಾಸಯ್ಯ ಅವರ ಇಡೀ ಬರವಣಿಗೆ ಮತ್ತು ಬದುಕನ್ನು ಅರಳಿಸುವಲ್ಲಿ ಅವರ ಧರ್ಮಪತ್ನಿ ಜಯಲಕ್ಷಮ್ಮ ಅವರ ಪಾತ್ರ ಹಿರಿದು’ ಎಂದು ತಿಳಿಸಿದರು.<br /> <br /> ಇದೇ ಸಂದರ್ಭದಲ್ಲಿ ಶ್ರೀನಿವಾಸಯ್ಯ ಅವರ ಕೃತಿಗಳನ್ನು ಕುರಿತು ‘ಪ್ರಜಾವಾಣಿ’ಯ ಮುಖ್ಯ ಉಪಸಂಪಾದಕ ಡಾ.ಜಿ.ಬಿ.ಹರೀಶ್, ವಿಮರ್ಶಕ ಡಾ.ಬೈರಮಂಗಲ ರಾಮೇಗೌಡ, ಗ್ರಂಥಾಲಯ ಇಲಾಖೆಯ ನಿವೃತ್ತ ನಿರ್ದೇಶಕ ಕೆ.ಜಿ.ವೆಂಕಟೇಶ್ ಅವರು ಮಾತನಾಡಿದರು.<br /> <br /> ಆದಿಚುಂಚನಗಿರಿಯ ವಿಜಯನಗರ ಶಾಖಾ ಮಠದ ಸೌಮ್ಯನಾಥ ಸ್ವಾಮೀಜಿ, ಡಾ.ಹೊ.ಶ್ರೀನಿವಾಸಯ್ಯ, ಪುಸ್ತಕ ಪ್ರಕಾಶನದ ಸಿವಿಜಿ ಚಂದ್ರು ಮತ್ತು ಗಿರಿಜಾ ಚಂದ್ರು ಉಪಸ್ಥಿತರಿದ್ದರು.<br /> <br /> <strong>ಬಿಡುಗಡೆಯಾದ ಕೃತಿಗಳು</strong><br /> ಬಾಳ ಹಾದಿ (ಆತ್ಮಕಥೆ), ತಂತ್ರಜ್ಞಾನ ಜನಕರು, ಕೈಗಾರಿಕೆ ಜನಕರು (ವ್ಯಕ್ತಿಚಿತ್ರಗಳು), ಆರೋಗ್ಯವೇ ಭಾಗ್ಯ (ಆರೋಗ್ಯ ಚಿಂತನೆ), ನೀರೇ ಔಷಧಿ (ಪ್ರಕೃತಿ ಚಿಕಿತ್ಸೆ), ರಾಮಯ್ಯ ಕಂಡ ಜರ್ಮನಿ ಮತ್ತು ಸಿಂಹಳದಲ್ಲಿ ಶಶಿ (ಮಕ್ಕಳಿಗಾಗಿ ಪ್ರವಾಸ ಕಥನಗಳು)</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>