ದೇವನಹಳ್ಳಿ: ಗ್ರಾಮಪಂಚಾಯಿತಿ ಚುನಾವಣೆಯಲ್ಲಿ ಮತದಾರರು ವಿವೇಚನೆಯಿಂದ ಮತ ಚಲಾಯಿಸಬೇಕು’ ಎಂದು ಸರ್ವ ಸಮತಾ ರಕ್ಷಣಾ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಎಚ್. ಗಿರೀಶ್ ತಿಳಿಸಿದರು.
‘ಪಂಚಾಯತ್ ವ್ಯವಸ್ಥೆ ಅನ್ವಯ ಆಡಳಿತ ವೀಕೇಂದ್ರಿಕರಣ ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಆದರೆ, ಕಳೆದ ಒಂದು ದಶಕಗಳಿಂದ
ನಡೆಯುತ್ತಿರುವ ಪಂಚಾಯಿತಿ ಚುನಾವಣೆಗಳು ಪ್ರಜಾಪ್ರಭುತ್ವವನ್ನು ಅಣಕಿಸುವಂತಿದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಕಲುಷಿತಗೊಂಡಿರುವ ರಾಜಕೀಯ ವ್ಯವಸ್ಥೆಯಲ್ಲಿ ಜಾತಿ, ಧರ್ಮ ಒಂದೆಡೆಯಾದರೆ ಮತದಾರರನ್ನು ಖರೀದಿಸಲು ಮದ್ಯ, ಹಣವನ್ನು ನೀಡಿ ಮತ ಯಾಚಿಸುವುದು ಸಾಮಾನ್ಯವಾಗಿದೆ’ ಎಂದು ಹೇಳಿದರು.