ತಿರುವನಂತಪುರ (ಪಿಟಿಐ): ಮಂಗಳ ನೌಕೆಯ ಬಾಳಿಕೆ ಅವಧಿ ಯೋಜಿತ ಆರು ತಿಂಗಳಿನಿಂದ ಒಂದು ವರ್ಷದವರೆಗೂ ವಿಸ್ತರಣೆ-ಯಾಗುವ ಸಾಧ್ಯತೆ ಇದೆ ಎಂದು ಇಲ್ಲಿನ ವಲೈಮಲ ಬಳಿ ಇರುವ ಲಿಕ್ವಿಡ್ ಪ್ರೊಪಲ್ಷನ್ ಸಿಸ್ಟಮ್ ಸೆಂಟರ್ ( ಎಲ್ಪಿಎಸ್ಸಿ) ನಿರ್ದೇಶಕ ಕೆ.ಶಿವನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಂಗಳಯಾನದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಎಲ್ಪಿಎಸ್ಸಿ ವಿಜ್ಞಾನಿಗಳಿಗೆ ಹಮ್ಮಿಕೊಂಡಿದ್ದ ಸನ್ಮಾನದ ಬಳಿಕ ಸುದ್ದಿಗಾರರೊಂದಿಗೆ ಮಾತ-ನಾಡಿ, ‘ ನೌಕೆಯ ಬಾಳಿಕೆ ಅವಧಿ ಕನಿಷ್ಠ ಆರು ತಿಂಗಳು ಎಂದು ಅಂದಾಜಿಸಲಾಗಿದೆ. ಆದರೆ ಇದು ಒಂದು ವರ್ಷದವರೆಗೂ ವಿಸ್ತರಿಸಬಹುದು’ ಎಂದರು.
‘ನೌಕೆಯಲ್ಲಿರುವ ಇಂಧನದ ಕೊನೆಯ ಗ್ರಾಮ್ ಉರಿಯುವವರೆಗೂ ಉಪಗ್ರಹವನ್ನು ಸದ್ಬಳಕೆ ಮಾಡಿಕೊಳ್ಳುವುದು ನಮ್ಮ ಉದ್ದೇಶ’ ಎಂದು ಅವರು ಸ್ಪಷ್ಟಪಡಿಸಿದರು.
ಮಂಗಳಯಾನಕ್ಕೆ ವ್ಯಕ್ತವಾದ ಟೀಕೆ ಕುರಿತಂತೆ ಕೇಳಿದ ಪ್ರಶ್ನೆಗೆ, ‘ಮಂಗಳ ಗ್ರಹದ ಛಾಯಾಚಿತ್ರ-ಗಳನ್ನು ತೆಗೆಯುವುದು ಮಾತ್ರವೇ ಈ ಯೋಜ-ನೆಯ ಉದ್ದೇಶವಲ್ಲ. ಇದು ನಾವು ಯುವ ಪೀಳಿಗೆಗೆ ಕೊಡುವ ಅತ್ಯಮೂಲ್ಯ ಕಾಣಿಕೆಯಾಗಿದೆ. ಯುವಜನತೆಗೆ ಇದೊಂದು ಅವಕಾಶ ಹಾಗೂ ಸವಾಲು ಕೂಡ ಹೌದು. ಸವಾಲು ಇದ್ದಾಗ ಮಾತ್ರ ಮುನ್ನಡೆ ಸಾಧ್ಯ’ ಎಂದರು. ‘೩೦೦ದಿನ-ಗಳವರೆಗೆ ಸ್ತಬ್ಧವಾಗಿರಿಸಲಾಗಿದ್ದ ನೌಕೆಯ ಎಂಜಿನ್ ಅನ್ನು ಮತ್ತೆ ಉರಿಯುವಂತೆ ಮಾಡಿದ್ದು ಮಂಗಳಯಾನದ ಅತಿಸಂಕೀರ್ಣ ಭಾಗ. ಯಾನ ಯಶಸ್ವಿಯಾಗಿದ್ದು, ವಿಶ್ವ-ಭೂಪಟದಲ್ಲಿ ಭಾರತವನ್ನು ಅಗ್ರಸ್ಥಾನಕ್ಕೆ
ಕೊಂಡೊಯ್ದಿದೆ’ ಎಂದು ಹೆಮ್ಮೆಯಿಂದ ನುಡಿದರು.
‘ಮಾನವಸಹಿತ ಚಂದ್ರಯಾನವನ್ನು ಸಾಧ್ಯ-ವಾಗಿ-ಸುವಂತಹ ತಂತ್ರಜ್ಞಾನವನ್ನು ಎಲ್ಪಿಎಸ್ಸಿ ಅಭಿವೃದ್ಧಿಪಡಿಸುತ್ತಿದೆ’ ಎಂದೂ ಹೇಳಿ-ದರು.‘ಹೆಚ್ಚಿನ ಸಾಮರ್ಥ್ಯದ ಪರೀಕ್ಷಾ ಸಾಧನ ಸಲಕರಣೆಗಳನ್ನು ಎಲ್ಪಿಎಸ್ಸಿ ಅಭಿವೃದ್ಧಿಪಡಿಸುತ್ತಿದೆ.
ಮಿತಿಯ ನಡುವೆಯೂ ನಾವು ಮಾನವ-ಸಹಿತ ಬಾಹ್ಯಾಕಾಶ ಯಾನ ಕೈಗೊಳ್ಳಬಲ್ಲೆವು. ಇದಕ್ಕೆ ಶ್ರೇಷ್ಠ ಗುಣಮಟ್ಟದ ನೌಕೆ ಬೇಕಾಗುತ್ತದೆ. ಜೀವ ರಕ್ಷಕ ಸಾಧನಗಳನ್ನೂ ಅಭಿವೃದ್ಧಿಪಡಿಸ-ಬೇಕಾಗುತ್ತದೆ’ ಎಂದು ಎಲ್ಪಿ-ಎಸ್ಸಿ ಸಹಾಯಕ ನಿರ್ದೇಶಕ ಎನ್್.ಆರ್.ವಿಷ್ಣು ಕಾರ್ತ ತಿಳಿಸಿದರು.